‘ಪ್ರವಾಸಿ ಮಂದಿರದ ವಿದ್ಯುತ್ ಕಡಿತಗೊಳಿಸುತ್ತಿರುವುದು ಇದು ಎರಡನೇ ಬಾರಿಗೆ. ಈ ಹಿಂದೆಯೂ ಕಡಿತಗೊಳಿಸಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗಣ್ಯರು ಬರುತ್ತಾರೆ ಎನ್ನುವ ಕಾರಣಕ್ಕೆ ಸಂಪರ್ಕ ಕಲ್ಪಿಸಿದರೂ, ಪುನಃ ಹಣ ಕಟ್ಟಿಲ್ಲವೆಂದು ಕಡಿತಗೊಳಿಸುತ್ತಾರೆ. ಇಲ್ಲಿನ ಕೆಲವು ಕೊಠಡಿಗಳಲ್ಲಿ ಮೇಲ್ಚಾವಣಿ ಸೋರುತ್ತಿದೆ. ಗೋಡೆಗಳ ಮೇಲೆಲ್ಲ ನೀರು ಇಳಿಯುತ್ತದೆ. ಕಟ್ಟಡದ ಮೇಲ್ಭಾಗದಲ್ಲಿ ಕಾಂಕ್ರೀಟ್ ಹಾಕುವ ಕೆಲಸ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು. ಇದುವರೆಗೂ ಆ ಕೆಲಸವಾಗಿಲ್ಲ. ಹೊರಗೆ ಮಾತ್ರ ಬಣ್ಣ ಮಾತ್ರ ಬಳಿದಿದ್ದಾರೆ. ಕೊಠಡಿಗಳ ಒಳಗೆ ಹಾಕಿರುವ ದಿವಾನ, ಕುರ್ಚಿಗಳು ಕಿತ್ತು ಹೋಗಿವೆ. ನೀರಿನ ಕೊರತೆಯೂ ಇದೆ’ ಎಂದು ಅವರು ದೂರಿದರು.