‘ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುವ ಮೂಲಕ ಗಡಿಪಾರು ಆಗುವಂತೆ ಮಾಡಿದ್ದಾರೆ‘ ಎಂದು ಸ್ಥಳೀಯ ನಿವಾಸಿಗಳಾದ ವಾಜಿದ್ಪಾಷ, ಮೂರ್ತಿ, ಪುರುಷೋತ್ತಮ್, ಶ್ರೀನಿವಾಸ್, ಆನಂದ್ಕುಮಾರ್ ದೂರಿದರು.
ಇದರಿಂದ ವಾರ್ಡ್ನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ನಗರಸಭೆಯಿಂದ ಯಾವುದೇ ಕೆಲಸ ಆಗಬೇಕಿದ್ದರು ಕಚೇರಿಗೆ ಅಲೆಯುವಂತಾಗಿದೆ. ಗಡಿಪಾರು ಆದೇಶ ರದ್ದಾಗಬೇಕು ಎಂದು ಆಗ್ರಹಿಸಿದ್ದಾರೆ.