ದೇವನಹಳ್ಳಿ: ಸಕಾಲದಲ್ಲಿ ಬಸ್ ಸಂಚಾರ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಉಗನವಾಡಿ ಗ್ರಾಮಸ್ಥರು ಬಿಎಂಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣಾ ಸಮಿತಿ ರಾಜ್ಯ ಘಟಕ ಅಧ್ಯಕ್ಷ ಎನ್.ಮುನಿರಾಜಪ್ಪ ಮಾತನಾಡಿ, ‘ಬಿಎಂಟಿಸಿ ಬಸ್ ಸಂಖ್ಯೆ 297ಕೆ, ವಿಶ್ವನಾಥಪುರದಿಂದ ಕೆ.ಆರ್.ಮಾರ್ಕೆಟ್ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಈ ಮಾರ್ಗದಲ್ಲಿ ಬರುವ ಸಾದಹಳ್ಳಿ, ಕೆಂಪತಿಮ್ಮನಹಳ್ಳಿ, ಪೂಜನಹಳ್ಳಿ, ಇಲತೊರೆ, ಜೋಗನಹಳ್ಳಿ, ಕನ್ನಮಂಗಲ, ಕನ್ನಮಂಗಲಪಾಳ್ಯ, ಅರಸನಹಳ್ಳಿ, ದೇವಗಾನಹಳ್ಳಿ, ಸೋಲೂರು, ಚಿಕ್ಕಚಿಮನಹಳ್ಳಿ, ಬೋಮ್ಮವಾರ ಗ್ರಾಮಸ್ಥರಿಗೆ ಹೆಚ್ಚು ಅನುಕೂಲವಾಗಿತ್ತು. ಇದನ್ನು ಏಕಾಏಕಿ ಜನರಲ್ ಶಿಪ್ಟ್ಗೆ ಬದಲಿಸಿರುವುದರಿಂದ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗಿದೆ’ ಎಂದು ದೂರಿದರು.