<p><strong>ಮಧುರೆ(ದೊಡ್ಡಬಳ್ಳಾಪುರ): </strong>ಪ್ಲಾಸ್ಟಿಕ್ ಅಂಶಗಳಿರುವ ಸ್ಯಾನಿಟರಿ ಪ್ಯಾಡ್ಗಳ ದೀರ್ಘಕಾಲದ ಬಳಕೆಯಿಂದ ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎಂದು ಸ್ತ್ರೀರೋಗ ತಜ್ಞೆ, ಲೇಖಕಿ ಡಾ.ಇಂದಿರಾ ಹೇಳಿದರು.</p>.<p>ತಾಲ್ಲೂಕಿನ ಗಾರಡಿಗರಪಾಳ್ಯದ ಗುಂಡುತೋಪು ಪ್ರದೇಶದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಭಾನುವಾರ ನಡೆದ ‘ಋತುಚಕ್ರದ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳಲು ಮುಟ್ಟಿನ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದರು.</p>.<p>ಶ್ಯಾಮು ಹೆಲ್ತ್ ಕೇರ್ ಸೆಂಟರ್, ಯುವ ಸಂಚಲನ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಚಿತವಾಗಿ ಮೈಕ್ರೋ ಫೈಬರ್ ಬಟ್ಟೆ ಪ್ಯಾಡ್ ವಿತರಣೆ ಮಾಡಲಾಯಿತು. </p>.<p>ಮಹಿಳೆಯರಿಗೆ ದೇಹದ ಸ್ವಾಭಾವಿಕ ಪ್ರಕ್ರಿಯೆಗಳ ಅರಿವಿನ ಕೊರತೆ ಇದೆ. ಪ್ಯಾಡ್ ಅಥವಾ ಬಳಸಿದ ಬಟ್ಟೆ ಸುಡಬಾರದು. ಪ್ರತಿ ಆರು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸುವುದು ಅವಶ್ಯ. ಮುಟ್ಟಿನ ಕಪ್ ಮತ್ತು ಪಿರಿಯಡ್ ಪ್ಯಾಂಟಿ ಮುಂತಾದವನ್ನು ಸ್ವಚ್ಛತೆಯೊಂದಿಗೆ ಬಳಸಬೇಕು ಎಂದರು.</p>.<p>ಟ್ರಸ್ಟ್ ಅಧ್ಯಕ್ಷ ಚಿದಾನಂದಮೂರ್ತಿ ಮಾತನಾಡಿದರು. ಚನ್ನದೇವಿ ಅಗ್ರಹಾರ ಗ್ರಾ.ಪಂ ಸದಸ್ಯೆ ಕಾಂತಲಕ್ಷ್ಮಿ, ಗಿರೀಶ್, ಲಾವಣ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುರೆ(ದೊಡ್ಡಬಳ್ಳಾಪುರ): </strong>ಪ್ಲಾಸ್ಟಿಕ್ ಅಂಶಗಳಿರುವ ಸ್ಯಾನಿಟರಿ ಪ್ಯಾಡ್ಗಳ ದೀರ್ಘಕಾಲದ ಬಳಕೆಯಿಂದ ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎಂದು ಸ್ತ್ರೀರೋಗ ತಜ್ಞೆ, ಲೇಖಕಿ ಡಾ.ಇಂದಿರಾ ಹೇಳಿದರು.</p>.<p>ತಾಲ್ಲೂಕಿನ ಗಾರಡಿಗರಪಾಳ್ಯದ ಗುಂಡುತೋಪು ಪ್ರದೇಶದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಭಾನುವಾರ ನಡೆದ ‘ಋತುಚಕ್ರದ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳಲು ಮುಟ್ಟಿನ ಸಮಯದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಎಂದರು.</p>.<p>ಶ್ಯಾಮು ಹೆಲ್ತ್ ಕೇರ್ ಸೆಂಟರ್, ಯುವ ಸಂಚಲನ ಚಾರಿಟೆಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಚಿತವಾಗಿ ಮೈಕ್ರೋ ಫೈಬರ್ ಬಟ್ಟೆ ಪ್ಯಾಡ್ ವಿತರಣೆ ಮಾಡಲಾಯಿತು. </p>.<p>ಮಹಿಳೆಯರಿಗೆ ದೇಹದ ಸ್ವಾಭಾವಿಕ ಪ್ರಕ್ರಿಯೆಗಳ ಅರಿವಿನ ಕೊರತೆ ಇದೆ. ಪ್ಯಾಡ್ ಅಥವಾ ಬಳಸಿದ ಬಟ್ಟೆ ಸುಡಬಾರದು. ಪ್ರತಿ ಆರು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸುವುದು ಅವಶ್ಯ. ಮುಟ್ಟಿನ ಕಪ್ ಮತ್ತು ಪಿರಿಯಡ್ ಪ್ಯಾಂಟಿ ಮುಂತಾದವನ್ನು ಸ್ವಚ್ಛತೆಯೊಂದಿಗೆ ಬಳಸಬೇಕು ಎಂದರು.</p>.<p>ಟ್ರಸ್ಟ್ ಅಧ್ಯಕ್ಷ ಚಿದಾನಂದಮೂರ್ತಿ ಮಾತನಾಡಿದರು. ಚನ್ನದೇವಿ ಅಗ್ರಹಾರ ಗ್ರಾ.ಪಂ ಸದಸ್ಯೆ ಕಾಂತಲಕ್ಷ್ಮಿ, ಗಿರೀಶ್, ಲಾವಣ್ಯ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>