ಶಾಲೆಯನ್ನು ಕಬ್ಬು ಮತ್ತು ಮಡಿಕೆಗಳಿಂದ ಸಿಂಗರಿಸಲಾಗಿತ್ತು. ಶಾಲೆಯ ಕಾರ್ಯದರ್ಶಿ ಶ್ರೀರಾಮ್ ಮಾತನಾಡಿ, ‘ಈಗಿನ ಕಾಲದ ಮಕ್ಕಳಿಗೆ ನಮ್ಮ ಪ್ರಾಚೀನ ಹಬ್ಬಗಳ ರೀತಿ ನೀತಿಗಳು ಗೊತ್ತಿಲ್ಲ. ಆದ್ದರಿಂದ ಶಾಲೆಯಲ್ಲಿ ಭಾರತದ ಹಿರಿಮೆಯನ್ನು ತಿಳಿಸಲು ಪೂರ್ವಜರು ಪಾಲಿಸಿಕೊಂಡು ಬಂದಿದ್ದ ಹಬ್ಬ ಹರಿದಿನಗಳ ಪರಿಚಯ ಮಾಡಲಾಗುತ್ತಿದೆ. ಮಕ್ಕಳಿಗೆ ದೇಶದ ಬಗ್ಗೆ ಅಭಿಮಾನ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.