<p><strong>ದೊಡ್ಡಹುಲ್ಲೂರು</strong>(ಹೊಸಕೋಟೆ): ಮುತ್ಯಾಲಮ್ಮ ದೇವಿ ಯುವಕರ ಬಳಗ ಹಾಗೂ ಯಲ್ಲಮ್ಮ ದೇವಿ ಯುವಕರ ಬಳಗ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎರಡು ದಿನಗಳ ವಾಲಿಬಾಲ್ ಕಪ್ ಪಂದ್ಯಾವಳಿಗೆ ಆಯೋಜಕರಾದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹುಲ್ಲೂರು ಸಿ.ಮಂಜುನಾಥ್ ಚಾಲನೆ ನೀಡಿದರು.</p>.<p>ಇದೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ನಾನಾ ಭಾಗಗಳಿಂದ 20-25 ತಂಡಗಳು ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಕ್ರೀಡೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ. ಆದರೆ, ಕ್ರೀಡೆಯಲ್ಲಿ ಭಾಗವಹಿಸುವುದು ಕ್ರೀಡಾ ಸ್ಫೂರ್ತಿಗೆ ಮೆರುಗು ತಂದಂತೆ. ಕ್ರೀಡೆ ಎಂಬುದು ಮನುಷ್ಯನ ಕ್ರಿಯಾಶೀಲತೆ ಹೆಚ್ಚಿಸುತ್ತದೆ. ಯಾವುದೇ ಕ್ರೀಡೆಯಲ್ಲೇ ಆಗಲಿ ಭಾಗವಹಿಸಿದ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸೋಲು–ಗೆಲುವಿನ ಮೆಟ್ಟಿಲು ಎಂದು ಸ್ವೀಕರಿಸಿ ಎಂದರು.</p>.<p><strong>ಕ್ರೀಡೆಯಲ್ಲಿ ವಿಜೇತರು : </strong>ಮೊದಲನೇ ಬಹುಮಾನ ₹50 ಸಾವಿರ ಹಾಗೂ ಟ್ರೋಫಿ, ಎರಡನೇ ಬಹುಮಾನ ₹30 ಸಾವಿರ, ಮೂರನೇ ಬಹುಮಾನ ₹20 ಸಾವಿರ ಹಾಗೂ ನಾಲ್ಕನೇ ಬಹುಮಾನ ₹10 ಸಾವಿರ ವಿತರಣೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.</p>.<p>ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಹುಲ್ಲೂರು ಕಿರಣ್ ಕುಮಾರ್, ಗ್ರಾ.ಪಂ ಅಧ್ಯಕ್ಷ ನೀಲಾಂಜಿನಪ್ಪ, ಮುಖಂಡರಾದ ಡಿ.ಎಲ್.ಮಂಜುನಾಥ್, ಕುಮಾರಣ್ಣ ಹಾಗೂ ಗ್ರಾಮದ ಮುಖಂಡರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೊಡ್ಡಹುಲ್ಲೂರು</strong>(ಹೊಸಕೋಟೆ): ಮುತ್ಯಾಲಮ್ಮ ದೇವಿ ಯುವಕರ ಬಳಗ ಹಾಗೂ ಯಲ್ಲಮ್ಮ ದೇವಿ ಯುವಕರ ಬಳಗ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎರಡು ದಿನಗಳ ವಾಲಿಬಾಲ್ ಕಪ್ ಪಂದ್ಯಾವಳಿಗೆ ಆಯೋಜಕರಾದ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹುಲ್ಲೂರು ಸಿ.ಮಂಜುನಾಥ್ ಚಾಲನೆ ನೀಡಿದರು.</p>.<p>ಇದೆ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದ ನಾನಾ ಭಾಗಗಳಿಂದ 20-25 ತಂಡಗಳು ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ. ಕ್ರೀಡೆಯಲ್ಲಿ ಸೋಲು-ಗೆಲುವು ಸರ್ವೆ ಸಾಮಾನ್ಯ. ಆದರೆ, ಕ್ರೀಡೆಯಲ್ಲಿ ಭಾಗವಹಿಸುವುದು ಕ್ರೀಡಾ ಸ್ಫೂರ್ತಿಗೆ ಮೆರುಗು ತಂದಂತೆ. ಕ್ರೀಡೆ ಎಂಬುದು ಮನುಷ್ಯನ ಕ್ರಿಯಾಶೀಲತೆ ಹೆಚ್ಚಿಸುತ್ತದೆ. ಯಾವುದೇ ಕ್ರೀಡೆಯಲ್ಲೇ ಆಗಲಿ ಭಾಗವಹಿಸಿದ ಎಲ್ಲರೂ ಗೆಲುವು ಸಾಧಿಸಲು ಸಾಧ್ಯವಿಲ್ಲ. ಸೋಲು–ಗೆಲುವಿನ ಮೆಟ್ಟಿಲು ಎಂದು ಸ್ವೀಕರಿಸಿ ಎಂದರು.</p>.<p><strong>ಕ್ರೀಡೆಯಲ್ಲಿ ವಿಜೇತರು : </strong>ಮೊದಲನೇ ಬಹುಮಾನ ₹50 ಸಾವಿರ ಹಾಗೂ ಟ್ರೋಫಿ, ಎರಡನೇ ಬಹುಮಾನ ₹30 ಸಾವಿರ, ಮೂರನೇ ಬಹುಮಾನ ₹20 ಸಾವಿರ ಹಾಗೂ ನಾಲ್ಕನೇ ಬಹುಮಾನ ₹10 ಸಾವಿರ ವಿತರಣೆ ಮಾಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು.</p>.<p>ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಹುಲ್ಲೂರು ಕಿರಣ್ ಕುಮಾರ್, ಗ್ರಾ.ಪಂ ಅಧ್ಯಕ್ಷ ನೀಲಾಂಜಿನಪ್ಪ, ಮುಖಂಡರಾದ ಡಿ.ಎಲ್.ಮಂಜುನಾಥ್, ಕುಮಾರಣ್ಣ ಹಾಗೂ ಗ್ರಾಮದ ಮುಖಂಡರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>