ಪ್ರಗತಿಪರ ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ‘ಆಹಾರ, ನೀರು ನಮಗೆ ನಿತ್ಯ ಬೇಕಾದ ಅಮೂಲ್ಯವಾದ ಜೀವ ಪೋಷಕ ವಸ್ತುಗಳು. ಇವುಗಳನ್ನು ವ್ಯರ್ಥವಾಗಿ ದುಂದು ಮಾಡಬಾರದು. ದ.ರಾ.ಬೇಂದ್ರೆ ಅವರು ಆಹಾರವನ್ನು ಅನ್ನಬ್ರಹ್ಮ ಎಂದು ಕರೆದಿದ್ದಾರೆ. ಆದ್ದರಿಂದ ನಾವು ಆಹಾರವನ್ನು ವ್ಯರ್ಥವಾಗಿ ಚೆಲ್ಲಬಾರದು. ಶಿಬಿರಕ್ಕೆ ಬಂದಿರುವುದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು. ನಾವು ಒಳ್ಳೆಯವರಾದರೆ ಅದು ನಮಗೆ ಗೌರವ, ತಂದೆ ತಾಯಿಯವರಿಗೆ ನೆಮ್ಮದಿ, ಸಮಾಜಕ್ಕೆ ಹಿತ’ ಎಂದರು.