ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟಕ್ಕೆ ಮೈಸೂರಿನ ಮೃಗಾಲಯದಿಂದ 2018ರಲ್ಲಿ ಗೌರಿ ಜಿರಾಫೆ ತರಲಾಗಿತ್ತು. ಎರಡು ವರ್ಷ ಏಕಾಂಗಿಯಾಗಿದ್ದ ಗೌರಿಗೆ ಮೈಸೂರಿನ ಮೃಗಾಲಯದಿಂದ ಯದುನಂದನ ಎಂಬ ಗಂಡು ಜಿರಾಫೆಯನ್ನು ಜತೆಗೂಡಿಸಲಾಗಿತ್ತು. ಆದರೆ, ಒಂದೇ ವರ್ಷದಲ್ಲಿ ಯದುನಂದನ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿತು. ಅಂದಿನಿಂದ ಮತ್ತೆ ಗೌರಿಗೆ ಒಂಟಿತನ ಬದುಕಾಯಿತು. ಸಂಗಾತಿಯಿಲ್ಲದೆ ಮಂಕಾಗಿದೆ.