ದೊಡ್ಡಬಳ್ಳಾಪುರ: ‘ನಮ್ಮೂರಿನ ಕೆರೆಯನ್ನು ಅಭಿವೃದ್ಧಿಪಡಿಸಲು ಕೆರೆ ಸುತ್ತಲಿನ ಎಲ್ಲ ಗ್ರಾಮಗಳ ಯುವಕರು ಹಾಗೂ ಹಿರಿಯರು ಸೇರಿದಂತೆ ಸುಮಾರು 50 ಜನ ತಾಲ್ಲೂಕಿನ ಮೆಳೇಕೋಟೆ, ಚನ್ನಾಪುರ ಗ್ರಾಮದ ಕೂಸಮ್ಮನ ಕೆರೆಗಳಿಗೆ ಭಾನುವಾರ ಭೇಟಿ ನೀಡಿ ಬಂದಿದ್ದೇವೆ’ ಎಂದು ವೀರಾಪುರ ಗ್ರಾಮದ ಯುವಕ ಶಿವಕುಮಾರ್, ಬಸವರಾಜು, ಮಜರಾಹೊಸಹಳ್ಳಿ ಗ್ರಾಮದ ಮೋಹನ್, ಸಂದೇಶ್, ಸಂತೋಷ್,ಶ್ರೀನಿವಾಸ್, ರವಿಕುಮಾರ್, ಚಿಕ್ಕತುಮಕೂರು ಗ್ರಾಮದ ಆಂಜಿನಪ್ಪ, ರಾಜಣ್ಣ ಹೇಳಿದರು.