ಸದಸ್ಯರಾದ ಶೈಲಾ, ವೆಂಕಟೇಶ್, ಭೀಮರಾಜು ಮಾತನಾಡಿ, ಮಾತೃ ಪೂರ್ಣ ಯೋಜನೆ ಸಂಪೂರ್ಣ ವಿಫಲವಾಗಿದೆ ಏನೇನು ನೀಡುತ್ತೀರಾ ಎಂಬುದು ಯಾರಿಗೂ ಗೊತ್ತಿಲ್ಲ, ನಮಗೆ ಮಾಹಿತಿ ಇಲ್ಲ ಎಂದರೆ ಫಲಾನುಭವಿಗಳಿಗೆ ಇನ್ನೇಲ್ಲಿ. ಆಹಾರ ತಯಾರಿಕೆ, ಶಿಶುಪಾಲನೆಯ ನಿರ್ವಹಣೆ, ಸ್ವಚ್ಛತೆ ಬಗ್ಗೆ 7 ವರ್ಷದಲ್ಲಿ ಒಂದಾದರು ಅರಿವು ಶಿಬಿರ ನಡೆಸಿದ್ದಿರಾ ಎಂದರು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದೀರಾ, ಮಕ್ಕಳ ಗ್ರಾಮ ಸಭೆ ನಡೆಸಿದ್ದೀರಾ ಎಂಬ ದೂರುಗಳ ಬಗ್ಗೆ ಇಲಾಖೆ ಅಧಿಕಾರಿ ಮೌನವಹಿಸಿದ್ದರು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು .