ವಿಜಯವಿನಾಯಕಸ್ವಾಮಿ ದೇವಾಲಯದ ಧರ್ಮದರ್ಶಿ ಎಸ್.ಪಿ.ಕೃಷ್ಣಾನಂದ್ ಮಾತನಾಡಿ, ‘ಸೇವಾ ಮನೋಭಾವ, ಅದರ ಮಹತ್ವ ಮತ್ತು ಸ್ವಾದ, ಸೇವೆಯ ಪರಿಣಾಮಗಳ ಬಗ್ಗೆ ಮನವರಿಕೆ ಮಾಡಿಕೊಡುವ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾದ ಮಹತ್ವದ ಘಟ್ಟ ವಿದ್ಯಾರ್ಥಿ ಜೀವನ. ಹಾಗಾಗಿ ಬಡವರ, ನೊಂದವರ ಮತ್ತು ರೋಗಿಗಳ ಸೇವೆಯನ್ನು ಮಾಡುವುದರ ಮಹತ್ವ ತಿಳಿದರೆ, ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಲು ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.