ಶಾಲಾ ಆಡಳಿತಾಧಿಕಾರಿ ಕೆ.ಎ. ಸುಬ್ಬಯ್ಯ ಮತ್ತು ಮುಖ್ಯಶಿಕ್ಷಕಿ ಛಾಯ ಮಾತನಾಡಿ, ‘ಗುಣಮಟ್ಟದ ಬೋಧನಾ ಶೈಲಿಯಲ್ಲಿ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿತ್ತು. ಶಿಕ್ಷಕರು ಮಕ್ಕಳನ್ನು ದತ್ತು ಪಡೆದು ಸೇತುಬಂಧ, ಗುಂಪುಗೂಡಿ ಅಭ್ಯಾಸ ಮತ್ತು ಪರಸ್ಪರ ಚರ್ಚೆ, ಸಮಸ್ಯೆಗೆ ಸ್ಥಳದಲ್ಲೆ ಪರಿಹಾರ ನೀಡಲಾಗುತ್ತಿತ್ತು. ಶೈಕ್ಷಣಿಕ ಸಾಲಿನ ಆರಂಭದಿಂದ ನವೆಂಬರ್ ವೇಳೆಗೆ ವಿಷಯವಾರು ಬೋಧನೆ ಮುಗಿಸಿ ಪುನರಾವರ್ತನೆ ನಡೆಸಲಾಗುತ್ತಿತ್ತು. ಕೋವಿಡ್ 19ರ ಸಮಸ್ಯೆ ಸಂದರ್ಭ ಆನ್ಲೈನ್ನಲ್ಲಿ ಬೋಧನೆಯನ್ನು ನಡೆಸಲಾಯಿತು. ಇದೆಲ್ಲದರ ಪರಿಣಾಮ ಉತ್ತಮ ಫಲಿತಾಂಶ ಹೊರಹೊಮ್ಮಲು ಸಾಧ್ಯವಾಗಿದೆ’ ಎಂದು ಹೇಳಿದರು.