ಮೃತರನ್ನು ಬೆಂಗಳೂರಿನ ರಾಮಮೂರ್ತಿ ನಗರದ ನಿವಾಸಿಗಳಾದ ರಾಜು(19), ಚಂದ್ರು (20), ನವೀನ್ (24) ಗುರುತಿಸಲಾಗಿದೆ. ನವೀನ್ ಎಂಬುವವರ ಹುಟ್ಟುಹಬ್ಬದ ನಿಮಿತ್ತ ತಾಲ್ಲೂಕಿನ ಘಾಟಿ ದೇವಾಲಯಕ್ಕೆ 8 ಮಂದಿ ವಾಹನದಲ್ಲಿ ಆಗಮಿಸಿದ್ದರು. ಲಾಕ್ಡೌನ್ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಪ್ರವೇಶ ನೀಡದ್ದರಿಂದ ದೇವರಿಗೆ ನಮಸ್ಕರಿಸಿ, ಸಮೀಪದಲ್ಲಿನ ತಿಪ್ಪಗಾನಹಳ್ಳಿ ಕೆರೆ ಬಳಿ ಈಜಲು ತೆರಳಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.