ರಾಮಾಯಣ ಮಹಾಕಾವ್ಯದ ಎಲ್ಲ ಪಾತ್ರಗಳು ಅಧ್ಯಾತ್ಮಿಕ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ವಿಶ್ವ ಸಹೋದರತ್ವದ ಸಂಕೇತಗಳಾಗಿವೆ. ಜನರ ಬದುಕಿಗೆ ಸದಾ ಕಾಲ ಮಾರ್ಗದರ್ಶನ ಮಾಡಬಲ್ಲ ಸಾಮರ್ಥ್ಯ ರಾಮಾಯಣದಲ್ಲಿದೆ. ವಾಲ್ಮೀಕಿ ರಾಮಾಯಣದಲ್ಲಿ ಕೊಟ್ಟಿರುವ ಉದಾತ್ತ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ಕುಮಾರ್ ಮಾತನಾಡಿ, ಜನರ ಮನದಾಳದ ಅಂಧಕಾರ ತೊಲಗಿಸುವ ನಿಟ್ಟಿನಲ್ಲಿ ಜನಿಸಿದ ಅನೇಕ ಸಾಧು, ಸಂತರು, ದಾರ್ಶನಿಕರು, ಕವಿ, ಸಾಹಿತಿಗಳ ಮಾರ್ಗದರ್ಶನ ಎಲ್ಲರಿಗೂ ಮೆಲ್ಪಂಕ್ತಿ ಆಗಲಿ ಎಂದು ಅಭಿಪ್ರಾಯಪಟ್ಟರು.