ದೊಡ್ಡಬಳ್ಳಾಪುರ:ವಡ್ಡರಹಳ್ಳಿಪಾಳ್ಯ ಸಮೀಪ ಪಾದಚಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅದೇ ಗ್ರಾಮದ ಲಕ್ಷ್ಮೀಶ (45) ಎಂಬುವರು ಮೃತಪಟ್ಟಿದ್ದಾರೆ.
ನಗರದ ರೈಲ್ವೆ ನಿಲ್ದಾಣ ಸಮೀಪದ ಸ್ಕೌಟ್ಸ್ ಕ್ಯಾಂಪ್ ರಸ್ತೆಯಲ್ಲಿ ದ್ವಿಚಕ್ರವಾಹನಗಳ ನಡುವೆ ಡಿಕ್ಕಿ ಸಂಭವಿಸಿ ಕೆಂಪೇಗೌಡ ನಗರದ ನಿವಾಸಿ ತರುಣ್ (21) ಮೃತಪಟ್ಟಿದ್ದಾರೆ.
ಮೃತ ತರುಣ್ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ನೋವಿನಲ್ಲಿಯೂ ಕುಟುಂಬಸ್ಥರು ಸಾರ್ಥಕತೆ ಮೆರೆದಿದ್ದಾರೆ. ಶನಿವಾರ ನಡೆದ ಅಪಘಾತ ಕುರಿತಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.