ಮನೆಗಳ ಬಳಿ ಭಕ್ತರು ಸ್ವಾಮಿಗೆ ಪೂಜೆ ಸಲ್ಲಿಸಿದರು. ಅರವಟಿಗೆ ಸ್ಥಾಪಿಸಿ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ರಥೋತ್ಸವದ ಅಂಗವಾಗಿ ಹನುಮಂತೋತ್ಸವ, ಪೂಲಂಗಿ ಸೇವೆ, ಶೇಷ ವಾಹನೋತ್ಸವ, ಕಲ್ಯಾಣೋತ್ಸವ, ಪ್ರಾಕಾರೋತ್ಸವ, ಶ್ರೀಕೃಷ್ಣ ಗಂಧೋತ್ಸವ ಆಯೋಜಿಸಲಾಗಿತ್ತು. ಸಂಜೆ ಧೂಳೋತ್ಸವ ಹಾಗೂ ತಿರುವಿಡಿ ಉತ್ಸವ ನಡೆಯಿತು.