<p><strong>ವಿಜಯಪುರ</strong> (ದೇವನಹಳ್ಳಿ): ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಿದ ಹಿನ್ನೆಲೆಯಲ್ಲಿ ಪುರಸಭೆ ಈಗ ಎಚ್ಚೆತ್ತುಕೊಂಡಿದೆ. ಫೆ.17ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಸುದ್ದಿ ಬೆನ್ನಲ್ಲೇ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.</p>.<p>ಬೆಂಗಳೂರಿನ ವಾಯ್ಸ್ ಆಫ್ ವಾಯ್ಸಲೆಸ್' ಎನ್ಜಿಒ ಸಹಯೋಗದಲ್ಲಿ ಬೀದಿ ನಾಯಿಗಳನ್ನು ಸೆರೆ ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ಪಟ್ಟಣದಲ್ಲಿ ಸುಮಾರು 1,000 ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ 800 ನಾಯಿಗಳನ್ನು ಹಿಡಿಯುವ ಗುರಿ ಹೊಂದಲಾಗಿದೆ. ಈಗಾಗಲೇ 150 ನಾಯಿಗಳನ್ನು ಸೆರೆ ಹಿಡಿಯಲಾಗಿದೆ.</p>.<p>ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ, ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಆರೈಕೆ ಮಾಡಿ ಹಿಡಿದ ಸ್ಥಳದಲ್ಲೇ ಬಿಡಲಾಗುವುದು ಎಂದು ತಿಳಿಸಿದರು.</p>.<p>ದತ್ತು ಯೋಜನೆಗೆ ಚಿಂತನೆ: ಪ್ರಾಣಿ ಪ್ರಿಯರು ಬೀದಿ ನಾಯಿಗಳನ್ನು ದತ್ತು ಪಡೆಯಬಹುದು. ಜಿಬಿಎ ಮಾದರಿಯಲ್ಲಿ ನಾಯಿಗಳನ್ನು ದತ್ತು ಪಡೆದು ಮನೆಯಲ್ಲೇ ಸಾಕುವವರಿಗೆ ತಿಂಗಳಿಗೆ ₹3,000 ನೀಡುವ ಸರ್ಕಾರದ ಯೋಜನೆ ಜಾರಿಗೆ ಪುರಸಭೆ ಚಿಂತನೆ ನಡೆಸಿದೆ ಎಂದು ಪರಿಸರ ಅಭಿಯಂತರ ಶೇಖರ್ ರೆಡ್ಡಿ ತಿಳಿಸಿದರು.</p>.<p>ಫೆ.9ರಂದು ಖಾಸಗಿ ಶಾಲೆ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಈ ಘಟನೆಯೇ ಪುರಸಭೆಯ ಕಾರ್ಯಾಚರಣೆಗೆ ವೇಗ ನೀಡಿದೆ. </p>
<p><strong>ವಿಜಯಪುರ</strong> (ದೇವನಹಳ್ಳಿ): ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಿದ ಹಿನ್ನೆಲೆಯಲ್ಲಿ ಪುರಸಭೆ ಈಗ ಎಚ್ಚೆತ್ತುಕೊಂಡಿದೆ. ಫೆ.17ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಸುದ್ದಿ ಬೆನ್ನಲ್ಲೇ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.</p>.<p>ಬೆಂಗಳೂರಿನ ವಾಯ್ಸ್ ಆಫ್ ವಾಯ್ಸಲೆಸ್' ಎನ್ಜಿಒ ಸಹಯೋಗದಲ್ಲಿ ಬೀದಿ ನಾಯಿಗಳನ್ನು ಸೆರೆ ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತಿದೆ. ಪಟ್ಟಣದಲ್ಲಿ ಸುಮಾರು 1,000 ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಮುಂದಿನ ಮೂರು ತಿಂಗಳಲ್ಲಿ 800 ನಾಯಿಗಳನ್ನು ಹಿಡಿಯುವ ಗುರಿ ಹೊಂದಲಾಗಿದೆ. ಈಗಾಗಲೇ 150 ನಾಯಿಗಳನ್ನು ಸೆರೆ ಹಿಡಿಯಲಾಗಿದೆ.</p>.<p>ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ, ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಆರೈಕೆ ಮಾಡಿ ಹಿಡಿದ ಸ್ಥಳದಲ್ಲೇ ಬಿಡಲಾಗುವುದು ಎಂದು ತಿಳಿಸಿದರು.</p>.<p>ದತ್ತು ಯೋಜನೆಗೆ ಚಿಂತನೆ: ಪ್ರಾಣಿ ಪ್ರಿಯರು ಬೀದಿ ನಾಯಿಗಳನ್ನು ದತ್ತು ಪಡೆಯಬಹುದು. ಜಿಬಿಎ ಮಾದರಿಯಲ್ಲಿ ನಾಯಿಗಳನ್ನು ದತ್ತು ಪಡೆದು ಮನೆಯಲ್ಲೇ ಸಾಕುವವರಿಗೆ ತಿಂಗಳಿಗೆ ₹3,000 ನೀಡುವ ಸರ್ಕಾರದ ಯೋಜನೆ ಜಾರಿಗೆ ಪುರಸಭೆ ಚಿಂತನೆ ನಡೆಸಿದೆ ಎಂದು ಪರಿಸರ ಅಭಿಯಂತರ ಶೇಖರ್ ರೆಡ್ಡಿ ತಿಳಿಸಿದರು.</p>.<p>ಫೆ.9ರಂದು ಖಾಸಗಿ ಶಾಲೆ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಈ ಘಟನೆಯೇ ಪುರಸಭೆಯ ಕಾರ್ಯಾಚರಣೆಗೆ ವೇಗ ನೀಡಿದೆ. </p>