ತಾತ, ಮುತ್ತಾತನ ಕಾಲದಿಂದಲೂ ಪ್ರತಿ ಯುಗಾದಿಯಂದು ಗ್ರಾಮಸ್ಥರು ಕುಂಟೆಯ ಬಳಿಯ ಮುನೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬಾವಿ ಬಳಿ ಪಚ್ಚೆ ಇಡುತ್ತೇವೆ. ಇಂತಹ ಪುರಾತನ ಸ್ಥಳವನ್ನೇ ಇಂದು ಹಣದ ಆಸೆಗೆ ಅಧಿಕಾರಿಗಳು ಮಾರಾಟ ಮಾಡಿದ್ದಾರೆ.
ಎಚ್.ಎಲ್. ಸುಬ್ರಮಣಿ, ಗ್ರಾಮಸ್ಥ
ಪರಂಪರೆ ಕುರುವು ಆದ ಕುಂಟೆಯ ಬಳಿಯ ಪುರಾತನ ಮುನೇಶ್ವರ ದೇವಾಲಯ ಮತ್ತು ಬಾವಿ ಸುತ್ತ ಗ್ರಾಮಸ್ಥರೆಲ್ಲರೂ ಸೇರಿ ಕಾಂಪೌಂಡ್ ಗೋಡೆ ಕಟ್ಟಿ ಇದು ಸರ್ಕಾರಿ ಜಾಗ ಎಂದು ಫಲಕ ಅಳವಡಿಸಿದ್ದೇವೆ. ಆದರೂ ಅಧಿಕಾರಿಗಳ ಕುಮ್ಮಕ್ಕಿನಿಂದ ವೇರ್ ಹೌಸ್ ಮಾಲೀಕರು ಅತಿಕ್ರಮಣ ಮಾಡಿ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ
ಎಚ್.ಆರ್. ವೆಂಕಟೇಶ್, ಗ್ರಾಮಸ್ಥ
ವೇರ್ ಹೌಸ್ ಕಂಪನಿ 43 ಎಕರೆಯಲ್ಲಿ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸುತ್ತಿದೆ. ಇದರಿಂದ ನಮ್ಮೂರಲ್ಲಿ ರೈತ ತಮ್ಮ ಹೊಲಗಳಿಗೆ ಹೋಗಬೇಕೆಂದರೆ 2 ರಿಂದ 3 ಕಿ ಮೀ ಸುತ್ತಿ ಬಳಸಿ ಹೋಗುವ ಪರಿಸ್ಥಿತಿ ಬಂದಿದೆ
ಚಂದ್ರಪ್ಪ, ಗ್ರಾಮಸ್ಥ
ನಂದಗುಡಿಯ ಸರ್ವೇ ನಂ.159 ಈ ಹಿಂದೆ ಎರಡು ಹಂತದಲ್ಲಿ ಸರ್ವೇ ಆಗಿದೆ. 1925ರಲ್ಲಿ ಅದು ಕುಂಟೆ ಎಂದು ಸರ್ವೆ ಆಗಿತ್ತು. ನಂತರದಲ್ಲಿ ಸರ್ವೆ ಆಗಿದ್ದರಲ್ಲಿ ಉದ್ದಂಡಚಾರಿ ಎಂದು ತೋರಿಸುತ್ತಿದೆ. ಈಗ ಅಂಕಿತ ಮತ್ತು ಗಿರೀಶ್ ಎನ್ನುವ ಹೆಸರಿನಲ್ಲಿ ಪಹಣಿ ಇದೆ. ಸಂಬಂದಪಟ್ಟವರಿಗೆ ಒಂದು ವಾರದೊಳಗೆ ದಾಖಲೆ ಸಲ್ಲಿಸುವಂತೆ ತಿಳಿಸಿದ್ದೇವೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತವೆ.