ಸಂಬಂಧಿ ರಾಜಣ್ಣ ಮಾತನಾಡಿ, ‘ಠಾಣೆ ಮುಂದೆ ಪೊಲೀಸರ ಎದುರು ಆರೋಪಿಗಳು ಹಲ್ಲೆ ಮಾಡಿದ ನಂತರ ಸೌಮ್ಯ ಸ್ವಭಾವದ ಮಂಜುಳಾ ಅವಮಾನಿತಳಾಗಿ ಪತಿಯನ್ನು ಆಸ್ಪತ್ರೆಗೆ ಕಳುಹಿಸಿ ವಿಡಿಯೋಧ್ವನಿ ಮುದ್ರಣ ಮಾಡಿ, ಹಲ್ಲೆ ನಡೆಸಿದ ಆರೋಪಿಗಳ ಹೆಸರನ್ನು ಮತ್ತು ಪೊಲೀಸರ ಕರ್ತವ್ಯ ಪ್ರಸ್ತಾಪಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಪರಿಸ್ಥಿತಿ ಏನು, ಪೊಲೀಸರು ಈ ರೀತಿ ಮಾಡಿದರೆ ಸಮಸ್ಯೆ ಹೇಳಿಕೊಂಡು ಠಾಣೆಗೆ ಬರುವ ಸಾರ್ವಜನಿಕರ ಪಾಡೇನು. 24 ತಾಸು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದರೆ ಅವರು ಯಾರ ಮರ್ಜಿಗೆ ಒಳಗಾಗಿದ್ದಾರೆ’ ಎಂದು ಕೇಳಿದರು.