<p><strong>ದೇವನಹಳ್ಳಿ</strong>: ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ಯುವತಿಯೊಬ್ಬರ ಮದುವೆ ವಿಚಾರವಾಗಿ ಉಂಟಾದ ವೈಷಮ್ಯ ಹಿಂಸಾತ್ಮಕ ರೂಪ ಪಡೆದು ಮಹಿಳೆಯೊಬ್ಬರು ಸಾವಿಗೀಡಾದ ಪ್ರಕರಣ ಶುಕ್ರವಾರ ನಡೆದಿದೆ.</p>.<p>ಮೃತರನ್ನು ರೇಣುಕಾ (45) ಎಂದು ಗುರುತಿಸಲಾಗಿದೆ. ಈ ಸಂಬಂಧ ಆರೋಪಿ ರಂಜಿತ್, ಅವರ ತಾಯಿ ರಾಧಮ್ಮ, ಅಣ್ಣ ನವೀನ್ ಮತ್ತು ಸಂಬಂಧಿ ಗಣೇಶ್ ವಿರುದ್ಧ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಘಟನೆ ಹಿನ್ನೆಲೆ:</strong> ರಂಜಿತ್ ವಿರುದ್ಧ ರೇಣುಕಾ ಅವರ ಪುತ್ರಿಯೊಂದಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಬಳಿಕ ಆರೋಪಿಗೆ ನ್ಯಾಯಾಲಯ ದೋಷಮುಕ್ತ ತೀರ್ಪು ನೀಡಿತ್ತು. ನಂತರ ಯುವತಿಯೊಂದಿಗೆ ಮದುವೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು.</p>.<p><strong>ಘಟನೆ ವಿವರ:</strong> ಶುಕ್ರವಾರ ಸಂಜೆ ಆರೋಪಿ ರಂಜಿತ್, ರೇಣುಕಾ ಅವರ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮದುವೆ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ. ಮಾತು ಹಿಂಸಾಚಾರಕ್ಕೆ ತಿರುಗಿ ರೇಣುಕಾ ಮತ್ತು ಅವರ ಕುಟುಂಬದವರ ಮೇಲೆ ದೈಹಿಕ ಹಲ್ಲೆ ನಡೆದಿದೆ.</p>.<p>ದಾಳಿಯಲ್ಲಿ ರೇಣುಕಾ ಅವರ ಎದೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರ ಮಗನಿಗೆ ಕಣ್ಣು ಮತ್ತು ಕೈಗೆ ಗಾಯವಾಗಿದೆ. ಜಗಳ ಬಿಡಿಸಲು ಹೋದ ವೃದ್ಧೆ ಮುನಿರತ್ನಮ್ಮ ಎಂಬುವರ ಮೇಲೂ ಹಲ್ಲೆ ನಡೆದಿದೆ.</p>.<p>ಗಾಯಾಳು ರೇಣುಕಾ ಅವರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ</strong>: ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿ ಯುವತಿಯೊಬ್ಬರ ಮದುವೆ ವಿಚಾರವಾಗಿ ಉಂಟಾದ ವೈಷಮ್ಯ ಹಿಂಸಾತ್ಮಕ ರೂಪ ಪಡೆದು ಮಹಿಳೆಯೊಬ್ಬರು ಸಾವಿಗೀಡಾದ ಪ್ರಕರಣ ಶುಕ್ರವಾರ ನಡೆದಿದೆ.</p>.<p>ಮೃತರನ್ನು ರೇಣುಕಾ (45) ಎಂದು ಗುರುತಿಸಲಾಗಿದೆ. ಈ ಸಂಬಂಧ ಆರೋಪಿ ರಂಜಿತ್, ಅವರ ತಾಯಿ ರಾಧಮ್ಮ, ಅಣ್ಣ ನವೀನ್ ಮತ್ತು ಸಂಬಂಧಿ ಗಣೇಶ್ ವಿರುದ್ಧ ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಘಟನೆ ಹಿನ್ನೆಲೆ:</strong> ರಂಜಿತ್ ವಿರುದ್ಧ ರೇಣುಕಾ ಅವರ ಪುತ್ರಿಯೊಂದಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಬಳಿಕ ಆರೋಪಿಗೆ ನ್ಯಾಯಾಲಯ ದೋಷಮುಕ್ತ ತೀರ್ಪು ನೀಡಿತ್ತು. ನಂತರ ಯುವತಿಯೊಂದಿಗೆ ಮದುವೆಗೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಉದ್ವಿಗ್ನತೆ ಮುಂದುವರಿದಿತ್ತು.</p>.<p><strong>ಘಟನೆ ವಿವರ:</strong> ಶುಕ್ರವಾರ ಸಂಜೆ ಆರೋಪಿ ರಂಜಿತ್, ರೇಣುಕಾ ಅವರ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮದುವೆ ವಿಚಾರವಾಗಿ ವಾಗ್ವಾದ ನಡೆಸಿದ್ದಾರೆ. ಮಾತು ಹಿಂಸಾಚಾರಕ್ಕೆ ತಿರುಗಿ ರೇಣುಕಾ ಮತ್ತು ಅವರ ಕುಟುಂಬದವರ ಮೇಲೆ ದೈಹಿಕ ಹಲ್ಲೆ ನಡೆದಿದೆ.</p>.<p>ದಾಳಿಯಲ್ಲಿ ರೇಣುಕಾ ಅವರ ಎದೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಅವರ ಮಗನಿಗೆ ಕಣ್ಣು ಮತ್ತು ಕೈಗೆ ಗಾಯವಾಗಿದೆ. ಜಗಳ ಬಿಡಿಸಲು ಹೋದ ವೃದ್ಧೆ ಮುನಿರತ್ನಮ್ಮ ಎಂಬುವರ ಮೇಲೂ ಹಲ್ಲೆ ನಡೆದಿದೆ.</p>.<p>ಗಾಯಾಳು ರೇಣುಕಾ ಅವರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>