ಭಾಷ್ ಪ್ರತಿಷ್ಠಾನದ ಸಿಎಸ್ಆರ್ ವಿಭಾಗದ ವ್ಯವಸ್ಥಾಪಕ ಜಿನಚಂದ್ರ ಮಾತನಾಡಿ, ‘ಪ್ರತಿಷ್ಠಾನವು ತಾಲ್ಲೂಕಿನ ಹುಸ್ಕೂರು, ಮುತ್ತಾನಲ್ಲೂರು, ನೆರಳೂರು, ಶಾಂತಿಪುರ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಿಳಾ
ಸಬಲೀಕರಣಕ್ಕೆ ಒತ್ತು ನೀಡಲು ಹಲವು ತರಬೇತಿ ಆಯೋಜಿಸಿದೆ. ಹೊಲಿಗೆ ತರಬೇತಿ, ಅಣಬೆ ಬೇಸಾಯ, ಬ್ಯಾಗ್ ತಯಾರಿಕೆ, ಬೇಕರಿ ತಿನಿಸು ತಯಾರಿಕೆ, ದಾಖಲೆಗಳ ನಿರ್ವಹಣೆ ಕಾರ್ಯಕ್ರಮದ ಮೂಲಕ ಸ್ವಸಹಾಯ ಸಂಘಗಳಿಗೆ ನೆರವಾಗಿದೆ’ ಎಂದರು.