‘ಸರಸ್ವತಿ ನಿಂಗಪ್ಪ ಹಾವಳ್ಳಿ (70) ಅವರು ಕೂಡ ಬುಧವಾರ ರಾತ್ರಿ ವಾಂತಿ– ಭೇದಿ ಕಾರಣ ಮೃತಪಟ್ಟಿದ್ದಾರೆ. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನೂ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ. ಸಚಿವರು ಶಿವಪ್ಪ ಅವರಿಗೆ ನೀಡಿದ ಪರಿಹಾರವನ್ನೇ ಸರಸ್ವತಿ ಅವರ ಕುಟುಂಬಕ್ಕೂ ನೀಡಬೇಕು’ ಎಂದು ಗ್ರಾಮದ ಮುಖಂಡರು ವಿಡಿಯೊ ಹರಿಬಿಟ್ಟು ಆಗ್ರಹಿಸಿದ್ದಾರೆ