‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ರಾಯಬಾಗದ ಚಿಂಚಲಿಯ ಪರಿಚಯಸ್ಥ ಯುವಕನಿಂದ ಸಾಲ ಪಡೆಯುವ ಉದ್ದೇಶದಿಂದ ನಗರಕ್ಕೆ ಬಂದಿದ್ದೆ. ಉದ್ಯಾನದಲ್ಲಿ ಕುಳಿತು ಮಾತನಾಡುವ ಉದ್ದೇಶದಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೊರಿಕ್ಷಾ ಹತ್ತಿದೆವು. ಚಾಲಕಅಮನ್ನಗರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡ ಹೋದ. ಮುಸ್ಲಿಂ ಆಗಿ ಹಿಂದೂ ಯುವಕನೊಂದಿಗೆ ಓಡಾಡುತ್ತೀಯಾ ಎಂದು ನಿಂದಿಸಿದ. ದಾರಿ ಮಧ್ಯದಲ್ಲಿ ಇನ್ನೂ ನಾಲ್ವರು ರಿಕ್ಷಾ ಹತ್ತಿದರು. ಆ ನಂತರ 10ರಿಂದ 15 ಮಂದಿ ಬೈಕ್ನಲ್ಲಿ ನಿರ್ಜನ ಪ್ರದೇಶಕ್ಕೆ ಬಂದರು. ಎಲ್ಲರೂ ಸೇರಿ ಕಬ್ಬಿಣದ ಸಲಾಕೆ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಲ್ಲಲು ಪ್ರಯತ್ನಿಸಿದರು. ಯುವಕನ ಮೊಬೈಲ್ ಫೋನ್, ₹ 50 ಸಾವಿರ, ಆಧಾರ್ ಮತ್ತು ಎಟಿಎಂ ಕಾರ್ಡ್ಗಳನ್ನು ಕಿತ್ತುಕೊಂಡರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು.