ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾರಿಗೂ ತೊಂದರೆಯಾಗದಂತೆ ಬದುಕುವುದೇ ಬಸವ ಧರ್ಮ’

Last Updated 5 ಆಗಸ್ಟ್ 2019, 16:00 IST
ಅಕ್ಷರ ಗಾತ್ರ

ಬೆಳಗಾವಿ: ‘‌ಯಾರಿಗೂ ತೊಂದರೆಯಾಗದಂತೆ ಸರಳ ಮತ್ತು ಸಜ್ಜನಿಕೆಯಿಂದ ಬದುಕುವುದೇ ಬಸವ ಮಾರ್ಗ’ ಎಂದು ನಗರಪಾಲಿಕೆ ನಿವೃತ್ತ ಅಧಿಕಾರಿ ಡಿ.ಕೆ. ನಿಂಬಾಳ ಹೇಳಿದರು.

ಬಸವ ಭೀಮ ಸೇನೆಯು ಬಸವೇಶ್ವರ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನ ತತ್ವ–ಸಿದ್ಧಾಂತಗಳ ಪ್ರತಿಪಾದನೆಯೊಂದಿಗೆ ಶರಣರ ಸಮ ಸಮಾಜದ ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ವಕೀಲ ಚನ್ನಬಸಪ್ಪ ಬಾಗೇವಾಡಿ, ‘ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಇನ್ನೂ ಸಿಕ್ಕಿಲ್ಲ. ನಾವು ನಿರಾಶಾವಾದಿಗಳಲ್ಲ. ನ್ಯಾಯಾಂಗದ ಮೇಲೆ ಸಂಪೂರ್ಣ ಭರವಸೆ ಇದೆ. ಮಾನ್ಯತೆ ದೊರೆಯುವ ವಿಶ್ವಾಸವಿದೆ’ ಎಂದರು.

ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ ಮಾತನಾಡಿ, ‘ಬಹು ಭಾಷಾ ಮತ್ತು ಸಂಸ್ಕೃತಿಯ ಈ ದೇಶವನ್ನು ಹಿಂದುತ್ವದ ಅಡಿಯಲ್ಲಿ ಕಟ್ಟಲು ಸಾಧ್ಯವಿಲ್ಲ. ಎಲ್ಲ ಶೋಷಿತ ಸಮುದಾಯಗಳ ಕಾಯಕ ಜೀವಿಗಳನ್ನು ಗೌರವಿಸುವ ಬಸವ ಮಾರ್ಗದಿಂದ ಮಾತ್ರ ಸುಭದ್ರ ಭಾರತ ನಿರ್ಮಿಸಬಹುದು. ಭಾರತ ಬಸವ ಭಾರತವಾಗಬೇಕು’ ಎಂದು ಹೇಳಿದರು.

ಮುಖಂಡರಾದ ಬಸವರಾಜ ರೊಟ್ಟಿ, ರಾಜಶೇಖರ ಭೋಜ, ಸಿದಗೌಡ ಮೋದಗಿ, ರಾಜು ಕುಂದಗೋಳ, ಬಿ.ಎ. ಪಾಟೀಲ, ಸಿದ್ರಾಮ ಸಾವಳಗಿ, ಆಕಾಶ ಹಲಗೇಕರಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT