<p><strong>ಸಂಕೇಶ್ವರ</strong>: ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಲಾಖೆಗಳಲ್ಲಿ ಅನುದಾನ ಕೊರತೆ ಇದ್ದರೂ, ನಿರಂತರ ಪ್ರಯತ್ನದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.</p>.<p>ಪಟ್ಟಣದ ಸಮೀಪದ ಬೋರಗಲ್-ನಿಡಸೋಸಿ ಮಾರ್ಗದ ಹಳ್ಳಗಳ ಮೇಲಿನ ರಸ್ತೆಗೆ ಲೋಕೋಪಯೋಗಿ ಇಲಾಖೆಯ ₹75 ಲಕ್ಷ ಅನುದಾನದಲ್ಲಿ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.</p>.<p>ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಹುಕಾಲದ ಬೇಡಿಕೆಯಂತೆ ಬೋರಗಲ್-ನಿಡಸೋಸಿ ಮಾರ್ಗದ ಹಳ್ಳಗಳ ಮೇಲಿನ ರಸ್ತೆಗೆ ಕಲ್ವರ್ಟ್ ಕಾಮಗಾರಿಗೆ ಚಾಲನೆ ನೀಡಿದ್ದು, ಬೆಳವಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇವೆ ಎಂದರು.</p>.<p>ಹಿರಣ್ಯಕೇಶಿ ನದಿಯ ಐದು ಬ್ಯಾರೇಜ್ ಕಾಮಗಾರಿಗಳು ಸುಮಾರು ₹60 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಕಣಗಲಾ ಬೃಹತ್ ಕೈಗಾರಿಕಾ ಪ್ರದೇಶದ ಫೇಸ್-2 ಹಂತದಲ್ಲಿ 600 ಎಕರೆ ಭೂಸ್ವಾಧೀನ ಕೈಗೊಳ್ಳಲಾಗಿದೆ. ಹಿಡಕಲ್ ಡ್ಯಾಂನ ಉದ್ಯಾನಕಾಶಿ ಫೇಸ್-1 ಮತ್ತು 2 ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಫೇಸ್-3 ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ ಎಂದು ಹೇಳಿದರು.</p>.<p>ಪ್ರಶಾಂತ ಪಾಟೀಲ, ರಾಯಪ್ಪ ಯಶವಂತ, ಸುಭಾಷ್ ಮಗದುಮ, ಗುರುನಾಥ ಸಂಕಣ್ಣವರ, ಬಸವಣ್ಣಿ ಮಗದುಮ, ಚಿದಾನಂದ ಯಶವಂತ, ಶ್ರೀಕಾಂತ ಸನದಿ, ದುಂಡಪ್ಪ ಹೆದ್ದುರಿ, ಸದಾಶಿವ ಕರೋಶಿ, ಮಹೇಶ ಯಶವಂತ, ಭೀಮಪ್ಪ ದುರ್ಗಪ್ಪಗೋಳ, ಪ್ರವೀಣ ಚೌಗಲಾ ಹಾಗೂ ಗುತ್ತಿಗೆದಾರ ಮಲ್ಲಪ್ಪ ಅಂಕಲೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂಕೇಶ್ವರ</strong>: ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಲಾಖೆಗಳಲ್ಲಿ ಅನುದಾನ ಕೊರತೆ ಇದ್ದರೂ, ನಿರಂತರ ಪ್ರಯತ್ನದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುತ್ತಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.</p>.<p>ಪಟ್ಟಣದ ಸಮೀಪದ ಬೋರಗಲ್-ನಿಡಸೋಸಿ ಮಾರ್ಗದ ಹಳ್ಳಗಳ ಮೇಲಿನ ರಸ್ತೆಗೆ ಲೋಕೋಪಯೋಗಿ ಇಲಾಖೆಯ ₹75 ಲಕ್ಷ ಅನುದಾನದಲ್ಲಿ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.</p>.<p>ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಹುಕಾಲದ ಬೇಡಿಕೆಯಂತೆ ಬೋರಗಲ್-ನಿಡಸೋಸಿ ಮಾರ್ಗದ ಹಳ್ಳಗಳ ಮೇಲಿನ ರಸ್ತೆಗೆ ಕಲ್ವರ್ಟ್ ಕಾಮಗಾರಿಗೆ ಚಾಲನೆ ನೀಡಿದ್ದು, ಬೆಳವಿ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇವೆ ಎಂದರು.</p>.<p>ಹಿರಣ್ಯಕೇಶಿ ನದಿಯ ಐದು ಬ್ಯಾರೇಜ್ ಕಾಮಗಾರಿಗಳು ಸುಮಾರು ₹60 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಕಣಗಲಾ ಬೃಹತ್ ಕೈಗಾರಿಕಾ ಪ್ರದೇಶದ ಫೇಸ್-2 ಹಂತದಲ್ಲಿ 600 ಎಕರೆ ಭೂಸ್ವಾಧೀನ ಕೈಗೊಳ್ಳಲಾಗಿದೆ. ಹಿಡಕಲ್ ಡ್ಯಾಂನ ಉದ್ಯಾನಕಾಶಿ ಫೇಸ್-1 ಮತ್ತು 2 ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಫೇಸ್-3 ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ ಎಂದು ಹೇಳಿದರು.</p>.<p>ಪ್ರಶಾಂತ ಪಾಟೀಲ, ರಾಯಪ್ಪ ಯಶವಂತ, ಸುಭಾಷ್ ಮಗದುಮ, ಗುರುನಾಥ ಸಂಕಣ್ಣವರ, ಬಸವಣ್ಣಿ ಮಗದುಮ, ಚಿದಾನಂದ ಯಶವಂತ, ಶ್ರೀಕಾಂತ ಸನದಿ, ದುಂಡಪ್ಪ ಹೆದ್ದುರಿ, ಸದಾಶಿವ ಕರೋಶಿ, ಮಹೇಶ ಯಶವಂತ, ಭೀಮಪ್ಪ ದುರ್ಗಪ್ಪಗೋಳ, ಪ್ರವೀಣ ಚೌಗಲಾ ಹಾಗೂ ಗುತ್ತಿಗೆದಾರ ಮಲ್ಲಪ್ಪ ಅಂಕಲೆ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>