ಈ ಅಭಯಾರಣ್ಯವು 19ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿದೆ. ಪಶ್ಚಿಮ ಬೆಟ್ಟಗಳ ಸಾಲಿನ ದಟ್ಟ ಅರಣ್ಯ ಹೊಂದಿರುವ ಮತ್ತು ಅಪರೂಪದ ಜೀವಿಗಳಿಗೆ ಆಶ್ರಯ ನೀಡಿರುವ ವನ್ಯಧಾಮ ಇದಾಗಿದೆ. ವಿನಾಶದ ಅಂಚಿನಲ್ಲಿರುವ ಸಸ್ಯ ಹಾಗೂ ಪ್ರಾಣಿ ಸಂಪತ್ತಿನ ಆಗರವಾಗಿದೆ. ನೆರೆಯ ಕಣಕುಂಬಿ ಹಾಗೂ ಭೀಮಗಡ ಎರಡು ಕಡೆಗಳಲ್ಲೂ ರಾತ್ರಿ ಪೆಟ್ರೋಲಿಂಗ್ ಅತ್ಯಗತ್ಯವಾಗಿದೆ. ಜೊತೆಗೆ, ಕಳ್ಳ ಬೇಟೆ ತಡೆ ಮೊದಲಾದವುಗಳ ಮೇಲೆ ಅಧಿಕಾರಿ ನಿಗಾ ವಹಿಸಬೇಕಾಗುತ್ತದೆ.ಈಗಿರುವ ಒಬ್ಬರೇ ಅಧಿಕಾರಿಯು ಎರಡೂ ಕಡೆಗಳಲ್ಲಿ ಸಮರ್ಪಕವಾಗಿ ನಿರ್ವಹಿಸುವುದು ಕಷ್ಟಸಾಧ್ಯವಾಗಿದೆ. ಒಂದೆಡೆ ಪೆಟ್ರೋಲಿಂಗ್ ಮಾಡಿದರೆ ಇನ್ನೊಂದೆಡೆಗೆ ಹೋಗಲಾಗದ ಸ್ಥಿತಿ ಇದೆ. ಇದು ಸಾಮಾನ್ಯ ಅರಣ್ಯವಲ್ಲವಾದ್ದರಿಂದ ಹೆಚ್ಚಿನ ಆದ್ಯತೆ ಕೊಡಬೇಕಾಗುತ್ತದೆ ಎನ್ನುತ್ತಾರೆ ಪರಿಸರ ಹೋರಾಟಗಾರರು.