ಅಥಣಿ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಮತ್ತು ಭಾವೈಕ್ಯ ಪ್ರವಚನಕಾರ ಇಬ್ರಾಹಿಂ ಸುತಾರ ಅವರಿಗೆ ಪಟ್ಟಣದ ಶಿವಶರಣ ನೂಲಿ ಚಂದಯ್ಯ ಕೊರಮ ಸಮಾಜ ಯುವಕ ಮಂಡಳದ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.
ಯುವಕ ಮಂಡಲದ ಗೌರವಾಧ್ಯಕ್ಷ ನಾಗರಾಜ ಭಜಂತ್ರಿ, ‘ಭಾರತೀಯ ಚಿತ್ರರಂಗದ ಮೇರು ಪರ್ವತವಾಗಿದ್ದ ಲತಾ ಅವರ ನಿಧನದಿಂದ ಸಂಗೀತ ಕ್ಷೇತ್ರ ಬಡವಾಗಿದೆ. ನಾಡಿನ ಶ್ರೇಷ್ಠ ಸೂಫಿಸಂತ, ಸರ್ವಧರ್ಮಗಳ ಸಾಕಾರ ಮೂರ್ತಿಯಾಗಿದ್ದ ಇಬ್ರಾಹಿಂ ಅವರ ನಿಧನವು ಕೂಡ ತುಂಬಾ ನೋವುಂಟು ಮಾಡಿದೆ. ದೇಶಕ್ಕೆ ಅವರಿಬ್ಬರ ಕೊಡುಗೆ ಅಪಾರವಾದುದು’ ಎಂದರು.
ಮುಖಂಡ ಬೀರಪ್ಪ ಯಕ್ಕಂಚಿ ಮತ್ತು ಕರವೇ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಮಾತನಾಡಿದರು.