‘ಮೃತ ಶಿವು ಕುಟುಂಬಸ್ಥರಿಗೆ ₹ 10 ಲಕ್ಷ ಪರಿಹಾರ ವಿತರಿಸಬೇಕು. ರಾಜ್ಯದಿಂದ ಗೋವಾ, ಮಹಾರಾಷ್ಟ್ರ ಹಾಗೂ ಕೇರಳಕ್ಕೆ ಅಕ್ರಮ ಗೋವು ಸಾಗಾಟ ಮಾಡಲಾಗುತ್ತಿದ್ದು, ಇದನ್ನು ತಡೆಗಟ್ಟಬೇಕು. ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಬೇಕೆಂದು’ ಆಗ್ರಹಿಸಿದರು. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವಿನಯ ಅಂಗ್ರೋಳಿ, ಕಾರ್ಯಕರ್ತರಾದ ಕಿರಣ ಶೆಟ್ಟಿ, ಸಚಿನ ಗರಡೆ, ವಿನಾಯಕ ಕಡೋಲಕರ್, ಅನೂಪ ಕಿತ್ತೂರ, ನಿಕೇತನ ಮೆಣಸೆ ಇದ್ದರು.