‘ಪ್ರತಿಯೊಂದು ಸೌಲಭ್ಯ ಪಡೆಯುವುದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ತಿದ್ದುಪಡಿ ಮತ್ತು ಹೊಸ ಕಾರ್ಡ್ ಅರ್ಜಿಗಾಗಿ 32 ಗ್ರಾಮಗಳಿಗೆ ಇದೊಂದೆ ಕೇಂದ್ರವಾಗಿದೆ. ಇಲ್ಲಿ ಸೇವೆ ಸಿಗದಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ. ಆದಷ್ಟು ಬೇಗ ಕೇಂದ್ರ ಪ್ರಾರಂಭಿಸದಿದ್ದರೆ ನಾಡಕಚೇರಿಗೆ ಬೀಗ ಹಾಕಿ ಪ್ರತಿಭಟಿಸಲಾಗುವುದು’ ಎಂದು ಮುಖಂಡರಾದ ಅದೀಕ ಲಾಮಖಾನೆ, ರಾವಸಾಬ ದಶವಂತ, ಗುರು ಕೋಡ್ನಿ, ಅರ್ಜುನ ಮೋರೆ, ಸಂದೀಪ ಮೋರೆ, ಸಿದ್ದು ಚವ್ಹಾಣ, ಅಲ್ತಾಫ ನಧಾಪ ಎಚ್ಚರಿಕೆ ನೀಡಿದರು.