‘ತಾಲ್ಲೂಕಿನ ಬೇರೆ ಬೇರೆ ಹಳ್ಳಿಗಳವರಾದ ನಾವು ಸಮೀಕ್ಷೆಯಲ್ಲಿ ಪಾಲ್ಗೊಂಡು, ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇವೆ. ಇದಾಗಿ ಮೂರ್ನಾಲ್ಕು ತಿಂಗಳುಗಳು ಕಳೆದಿವೆ. ಆದರೆ ಇದುವರೆಗೂ ನಮಗೆ ನೀಡಬೇಕಾದ ಸಂಬಳವನ್ನು ಕೊಟ್ಟಿಲ್ಲ. ನಮ್ಮ ಒತ್ತಾಯದ ಮೇರೆಗೆ ₹ 100, ₹ 200, ₹ 500 ಹಾಗೂ ₹ 1 ಸಾವಿರವನ್ನು ಜಮಾ ಮಾಡಿದ್ದಾರೆ. ಬಹುತೇಕರಿಗೆ ಸಂಪೂರ್ಣವಾಗಿ ವೇತನ ಸಿಕ್ಕಿಲ್ಲ. ಅಲೆದಾಡಿದರೂ 30ರಿಂದ 40 ಪಿ.ಆರ್.ಗಳಿಗೆ ಹಣ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಖುದ್ದಾಗಿ ವಿಚಾರಿಸಿದಾಗ, ಹಾರಿಕೆಯ ಉತ್ತರಗಳನ್ನು ನೀಡಿದ್ದಾರೆ. ಕೋವಿಡ್–19 ಭೀತಿಯಲ್ಲೂ ಕೆಲಸ ಮಾಡಿದ ನಮಗೆ ನೆರವಾಗದಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.