ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರು ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವ ಕನ್ನಡಪರ ಹೋರಾಟಗಾರರು, ಅದನ್ನು ತೆರವುಗೊಳಿಸದಂತೆ ಕಾಯ್ದುಕೊಂಡು ಧರಣಿ ಮುಂದುವರಿಸಿದ್ದಾರೆ.
ರಾತ್ರಿ ಅಲ್ಲಿಯೇ ಅವರು ಊಟ ಮಾಡಿದರು. ಕನ್ನಡ ಅಭಿಮಾನಿಗಳು ತಂದುಕೊಟ್ಟ ಪುಲಾವ್, ಮೈಸೂರು ಪಾಕ್, ಲಡ್ಡು ಸವಿದರು.
ಸಂಜೆ ಸ್ಥಳಕ್ಕೆ ಬಂದ ಮಹಾನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಹಾಗೂ ಪೊಲೀಸ್ ಅಧಿಕಾರಿಗಳು ಮಾತುಕತೆಗಾಗಿ ಕಚೇರಿಗೆ ಬರುವಂತೆ ಆಹ್ವಾನಿಸಿದರು. ಆದರೆ, ಹೋರಾಟಗಾರರು ನಾವು ಬರುವುದಿಲ್ಲ ಎಂದು ತಿಳಿಸಿದರು. ಹೀಗಾಗಿ ಅಧಿಕಾರಿಗಳ ಮನವೊಲಿಕೆ ಫಲ ನೀಡಲಿಲ್ಲ.