ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು

Last Updated 19 ಸೆಪ್ಟೆಂಬರ್ 2022, 14:32 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಸೋಮವಾರ ಕೆರೆಯಲ್ಲಿ ಎತ್ತುಗಳ ಮೈ ತೊಳೆಯಲು ಹೋದ ರೈತ ಕಾಲು ಜಾರಿ ಬಿದ್ದು ಮೃತಪಟ್ಡಿದ್ದಾರೆ.

ಮುಳ್ಳೂರು ನಿವಾಸಿ ಮಲ್ಲಪ್ಪ ಅನವಾಳ (45) ಮೃತಪಟ್ಟವರು. ಎಂದಿನಂತೆ ಸೋಮವಾರ ಕೂಡ ಎತ್ತುಗಳ ಮೈ ತೊಳೆಯಲು ಅವರು ಕೆರೆ ದಡಕ್ಕೆ ಹೋಗಿದ್ದರು. ನಿರಂತರ ಮಳೆಯ ಕಾರಣ ಕೆರೆ ತುಂಬಿದೆ. ಮೈ ತೊಳೆಯುವ ವೇಳೆ ಮಲ್ಲಪ್ಪ ಅವರು ಕಾಲುಜಾರಿ ನೀರಿಗೆ ಬಿದ್ದರು. ಇದನ್ನು ಕಂಡು ಸತ್ತಲಿನ ಕೆಲ ರೈತರೂ ಕೆರೆಗೆ ಇಳಿದು ಮಲ್ಲಪ್ಪ ಅವರನ್ನು ರಕ್ಷಿಸಲು ಮುಂದಾದರು. ಈಜಲು ಸಾಧ್ಯವಾಗಲಿಲ್ಲ. ನಂತರ ಊರಿನ ಕೆಲ ಯುವಕರು ಮಲ್ಲಪ್ಪ ಅವರನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟರೊಳಗೆ ಅವರು ಪ್ರಾಣ ಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT