ಮುಳ್ಳೂರು ನಿವಾಸಿ ಮಲ್ಲಪ್ಪ ಅನವಾಳ (45) ಮೃತಪಟ್ಟವರು. ಎಂದಿನಂತೆ ಸೋಮವಾರ ಕೂಡ ಎತ್ತುಗಳ ಮೈ ತೊಳೆಯಲು ಅವರು ಕೆರೆ ದಡಕ್ಕೆ ಹೋಗಿದ್ದರು. ನಿರಂತರ ಮಳೆಯ ಕಾರಣ ಕೆರೆ ತುಂಬಿದೆ. ಮೈ ತೊಳೆಯುವ ವೇಳೆ ಮಲ್ಲಪ್ಪ ಅವರು ಕಾಲುಜಾರಿ ನೀರಿಗೆ ಬಿದ್ದರು. ಇದನ್ನು ಕಂಡು ಸತ್ತಲಿನ ಕೆಲ ರೈತರೂ ಕೆರೆಗೆ ಇಳಿದು ಮಲ್ಲಪ್ಪ ಅವರನ್ನು ರಕ್ಷಿಸಲು ಮುಂದಾದರು. ಈಜಲು ಸಾಧ್ಯವಾಗಲಿಲ್ಲ. ನಂತರ ಊರಿನ ಕೆಲ ಯುವಕರು ಮಲ್ಲಪ್ಪ ಅವರನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟರೊಳಗೆ ಅವರು ಪ್ರಾಣ ಬಿಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.