ತೆಲಸಂಗ: ‘ಜೀವನದುದ್ದಕ್ಕೂ ದಾನ ಮಾಡುವ ಮೂಲಕವೇ ಶ್ರೇಷ್ಠತೆ ಕಂಡವರು ನಮಗೆ ಮಾದರಿ ಆಗಬೇಕು. ಹಂಚಿಕೊಂಡು ತಿನ್ನುವವರ ಜೀವನ ನೆಮ್ಮದಿಯಿಂದ ಕೂಡಿರುತ್ತದೆ ಎನ್ನುವುದನ್ನು ನೆನಪಿಡಬೇಕು’ ಎಂದು ಡಾ.ಎಸ್.ಐ. ಇಂಚಗೇರಿ ಹೇಳಿದರು.
ಗ್ರಾಮದಲ್ಲಿಶುಕ್ರವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಶೈಲಂ ದಾಸೋಹ ಸೇವಾ ಸಮಿತಿಯ ಚನ್ನಪ್ಪ ದಶಮಾ, ಸಿದ್ದಪ್ಪ ಸಕ್ರಿ, ಮುರಗೇಶ ಸಕ್ರಿ, ಸಂತೋಷ ಬಡಿಗೇರ, ಗೌಡಪ್ಪ ಅನಂತಪೂರ, ಅಪ್ಪು ಮೆಣಸಂಗಿ, ದಾನಪ್ಪ ಕರ್ಣಿ, ಗೀರೀಶ ಸಕ್ರಿ ಅವರನ್ನು ಸತ್ಕರಿಸಿದರು.
‘ಜೀವನ ಕೇವಲ ಪಡೆಯುವುದಕ್ಕಲ್ಲ. ಪಡೆದಿದ್ದನ್ನು ಸದ್ವಿನಿಯೋಗ ಮಾಡುವುದಕ್ಕಾಗಿಯೂ ಇದೆ ಎನ್ನುವ ಸತ್ಯವನ್ನು ಎಲ್ಲರೂ ತಿಳಿದು ನಡೆಯಬೇಕು’ ಎಂದರು.