ಚುಳಕಿಯ ಗವಿಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ಮತ್ತು ಉಗರಗೋಳದ ನಿರ್ವಾಣೇಶ್ವರ ಮಠದ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮವನ್ನು ಗ್ರಾಮದ ನಿವೃತ್ತ ಶಿಕ್ಷಕ ಗುರಪ್ಪ ಮಾಗುಂಡ ಉದ್ಘಾಟಿಸಿದರು. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಕಾರಣರಾದ ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಸೊಪ್ಪಡ್ಲ, ಕೆ.ಜಿ. ಭಜಂತ್ರಿ, ಜಿ.ಎಸ್. ಗರಗದ, ಪ್ರಭಾವತಿ ಕುಲಕರ್ಣಿ, ಸದ್ಯ ಬೆಳಗಾವಿ ತಾಲ್ಲೂಕು ಹಂಗರಗಾ ಮರಾಠಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುವ ಬಸಮ್ಮ ಭಜಂತ್ರಿ, ಆಚಮಟ್ಟಿ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಕಲ್ಲಯ್ಯ ಪೂಜೇರ ಅವರನ್ನು ಸತ್ಕರಿಸಿದರು.