ಮೂವರು ಅಧಿಕಾರಿಗಳ ತಂಡವು, ಖಾನಾಪುರ ಪಟ್ಟಣದಲ್ಲಿ ತರಾತುರಿಯಲ್ಲಿ ಭೇಟಿ ಮುಗಿಸಿತು. 30 ನಿಮಿಷಗಳಲ್ಲಿ ಮೂರು ಸ್ಥಳಗಳನ್ನು ವೀಕ್ಷಿಸಿದರು. ನೆರೆ ಸಂತ್ರಸ್ತರನ್ನಾಗಲಿ ಅಥವಾ ರೈತರನ್ನಾಗಲಿ ಭೇಟಿಯಾಗಲಿಲ್ಲ. ಅಧಿಕಾರಿಗಳು ಕೊಟ್ಟ ಮಾಹಿತಿಯನ್ನಷ್ಟೆ ದಾಖಲಿಸಿಕೊಂಡರು. ಅಲ್ಲಿನ ಮಾರುತಿ ನಗರದ ಬಳಿ ಮಲಪ್ರಭಾ ನದಿ ಪ್ರವಾಹದಿಂದ ಸೇತುವೆ ಬಳಿ ಕೊಚ್ಚಿ ಹೋಗಿದ್ದ ರಸ್ತೆಯನ್ನು ವೀಕ್ಷಿಸಿದರು. ಪೊಲೀಸ್ ತರಬೇತಿ ಶಾಲೆ, 4ಸಾವಿರ ಕೋಳಿಮರಿಗಳು ಸಾವಿಗೀಡಾಗಿದ್ದ ಕೋಳಿ ಫಾರಂಗೆ ಭೇಟಿ ನೀಡಿದ್ದರು. ಅವರಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.