ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ |ಗಂಗಾಮತಸ್ಥ ಸಮಾಜ: ಪದಾಧಿಕಾರಿಗಳ ಆಯ್ಕೆ

Published 22 ಡಿಸೆಂಬರ್ 2023, 12:48 IST
Last Updated 22 ಡಿಸೆಂಬರ್ 2023, 12:48 IST
ಅಕ್ಷರ ಗಾತ್ರ

ಬೈಲಹೊಂಗಲ: ಗಂಗಾಮತಸ್ಥರ ಸಮಾಜದ ಜಿಲ್ಲಾ ಸಂಘಟನೆಗೆ ಜಿಲ್ಲೆಯ ಎಲ್ಲ ತಾಲ್ಲೂಕು ಸೇರಿದಂತೆ ನಗರ ವ್ಯಾಪ್ತಿಯಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಬೆಳಗಾವಿಯಲ್ಲಿ ಗಂಗಾಮತಸ್ಥರ ಸಮಾಜ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕುರುಂದವಾಡೆ ನೇತೃತ್ವದಲ್ಲಿ ಸಭೆ ನಡೆಯಿತು.

ಗೌರವಾಧ್ಯಕ್ಷರಾಗಿ ಡಾ.ಬಾಬಣ್ಣ ತಳವಾರ, ಮಹಿಳಾ ಅಧ್ಯಕ್ಷರಾಗಿ ಮಾಧುರಿ ಪೂಜೇರಿ, ನಗರ ಅಧ್ಯಕ್ಷರಾಗಿ ಸಿದ್ದು ಸುಣಗಾರ, ಯುವ ಅಧ್ಯಕ್ಷರಾಗಿ ಅಪ್ಪಯ್ಯ ರಾಮರಾವ್, ಉಪಾಧ್ಯಕ್ಷರಾಗಿ ಲಕ್ಷ್ಮಣ ಯಮಕನಮರಡಿ, ಎಸ್.ಕೆ.ಹೊಳೆಪ್ಪನವರ, ಮಾರುತಿ ಸುಣಗಾರ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ ಪಾಟೀಲ, ಖಜಾಂಚಿಯಾಗಿ ವಿಕ್ರಮ್ ಪೂಜೇರಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವಾನಂದ ಕೋಲಕಾರ, ಸಹಕಾರ್ಯದರ್ಶಿಯಾಗಿ ಭರಮಣ್ಣಾ ಅಮ್ಮಿನಭಾವಿ ಆಯ್ಕೆಯಾಗಿದ್ದಾರೆ.

ಸಲಹಾ ಸಮಿತಿ ಅಧ್ಯಕ್ಷರಾಗಿ ಗಂಗಾರಾಮ ತಳವಾರ, ಸದಸ್ಯರಾಗಿ ಮಲ್ಲಪ್ಪ ಮುರಗೋಡ, ಎಸ್.ಕೆ.ಗಸ್ತಿ, ಡಾ.ವಿ.ವಿ.ಡಾಂಗೆ, ಅಣ್ಣಾಸಾಬ ಕೋಳಿ, ರಮೇಶ ಕೋಲಕಾರ, ಅಶೋಕ ವಾಲಿಕಾರ, ಮಹಾದೇವ ಗೋಣಿ, ಬಸವರಾಜ ಮುತ್ಯಾಗೋಳ, ದೇವಸ್ಥಾನ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಅಪ್ಪಾಸಾಬ ಪೂಜೇರಿ ಆಯ್ಕೆಯಾಗಿದ್ದಾರೆ.

ಡಾ.ಬಾಬಣ್ಣ ತಳವಾರ
ಡಾ.ಬಾಬಣ್ಣ ತಳವಾರ

‘ಬೆಳಗಾವಿ ಜಿಲ್ಲಾ ಗಂಗಾಮತಸ್ಥರ ಸಮಾಜದ ಸಂಘದ ಸದಸ್ಯರಾಗಿ ಬಸವರಾಜ ಕುರುಂದವಾಡೆ, ಕಾಶೆಪ್ಪ ಸಂಗನಕೇರಿ, ಪಂಚಲಿಂಗೇಶ ಬಾರಕೇರ, ರಾಮಚಂದ್ರ ಪೂಜೇರ, ಬಸವರಾಜ ಬಾರ್ಕಿ, ಸಂದೀಪ ಕೋಳಿ, ಮಂಜುನಾಥ ಕೋಳಿ, ರಾಮಚಂದ್ರ ಸುಣಗಾರ, ರವೀಂದ್ರ ಕೋಳಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಜಿಲ್ಲಾ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT