ಬೈಲಹೊಂಗಲ ತಾಲ್ಲೂಕಿನ ಹಣ್ಣಿಕೇರಿ ನಡಕಿನ ಓಣಿಯ ಸಿದ್ದಪ್ಪ ಕುರುಬರ, ಸೋಮನಾಥ ಮಾದನಶೆಟ್ಟಿ, ಸಾಂಬ್ರಾ ಲಕ್ಷ್ಮಿ ಗಲ್ಲಿಯ ಸಾಗರ ನಾಯಿಕ ಹಾಗೂ ಪಂತ ಬಾಳೇಕುಂದ್ರಿ ಪಂತ ನಗರದ ವಿನಾಯಕ ಬಸಪ್ಪ ಸೋಮನ್ನವರ ಬಂಧಿತರು. ಅವರು ಬೆಳಗಾವಿ-ಬಾಗಲಕೋಟೆ ರಸ್ತೆಯ ಸಿಂಧೊಳ್ಳಿ ಕ್ರಾಸ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.