ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಬೆಳಗಾವಿ | ಸ್ಥಿರವಾಗದ ಚಿನ್ನ, ಬೆಳ್ಳಿಯ ದರ: ಅಕ್ಕಸಾಲಿಗರಿಗೆ ಬರ

ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ ಚಿನ್ನ, ಬೆಳ್ಳಿಯ ದರ; ಅಂತರರಾಜ್ಯಕ್ಕೆ ಮಾರಾಟ ಮಾಡುತ್ತಿದ್ದವರೆಲ್ಲ ಈಗ ನಿರುದ್ಯೋಗಿಗಳು
Published : 16 ಫೆಬ್ರುವರಿ 2026, 8:00 IST
Last Updated : 16 ಫೆಬ್ರುವರಿ 2026, 8:00 IST
ಫಾಲೋ ಮಾಡಿ
Comments
ಬೆಳ್ಳಿ ಮೂರ್ತಿ ತಯಾರಿಕೆಯಲ್ಲಿ ಮಗ್ನರಾದ ಬೆಳಗಾವಿಯ ಅಕ್ಕಸಾಲಿಗ ಆನಂದ ಹಾವನೂರ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳ್ಳಿ ಮೂರ್ತಿ ತಯಾರಿಕೆಯಲ್ಲಿ ಮಗ್ನರಾದ ಬೆಳಗಾವಿಯ ಅಕ್ಕಸಾಲಿಗ ಆನಂದ ಹಾವನೂರ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಅಕ್ಕಸಾಲಿಗ ಆನಂದ ಹಾವನೂರ ತಯಾರಿಸಿದ ಬೆಳ್ಳಿ ಮೂರ್ತಿ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಅಕ್ಕಸಾಲಿಗ ಆನಂದ ಹಾವನೂರ ತಯಾರಿಸಿದ ಬೆಳ್ಳಿ ಮೂರ್ತಿ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಸರಾಫ್‌ ಬಜಾರ್‌ನಲ್ಲಿ ಸ್ಥಗಿತಗೊಂಡ ಬೆಳ್ಳಿ ಸಾಮಗ್ರಿಗಳ ತಯಾರಿಕಾ ಘಟಕ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ 
ಬೆಳಗಾವಿಯ ಸರಾಫ್‌ ಬಜಾರ್‌ನಲ್ಲಿ ಸ್ಥಗಿತಗೊಂಡ ಬೆಳ್ಳಿ ಸಾಮಗ್ರಿಗಳ ತಯಾರಿಕಾ ಘಟಕ  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ 
ಶೇ 90ರಷ್ಟು ಅಕ್ಕಸಾಲಿಗರಿಗೆ ಬೇರೆ ಕೆಲಸ– ವ್ಯಾಪಾರ ಬರುವುದಿಲ್ಲ. ಕೆಲವು ಕಾರ್ಮಿಕರು ವಡಾ–ಪಾವ್ ಮಾರುವ ಗೂಡಂಗಡಿ ಇಟ್ಟುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ‘ಬುದ್ಧಿ’ ಕಲಿತ ನಾನು ಕಷ್ಟಕಾಲಕ್ಕೆ ಬರಲಿ ಎಂದು ಒಂದಷ್ಟು ಸಂಗ್ರಹ ಮಾಡಿಕೊಂಡಿದ್ದೆ. ಈಗ ಅದಷ್ಟೇ ಆಧಾರ. 
ಆನಂದ ಹಾವನೂರ ಅಕ್ಕಸಾಲಿಗ ಬೆಳಗಾವಿ
ದರಗಳು ಕನಿಷ್ಠ ಮೂರು ತಿಂಗಳು ಸ್ಥಿರವಾಗಿ ನಿಲ್ಲದಿರುವುದೂ ದೊಡ್ಡ ಸಮಸ್ಯೆ. ಉದಾಹರಣೆಗೆ; ಜ.25ರಂದು ಒಬ್ಬ ಗ್ರಾಹಕರು 20 ತೊಲಿ ಬಂಗಾರದ ಆರ್ಡರ್‌ ಕೊಟ್ಟರು. ನಾವು ಆಭರಣ ಸಿದ್ಧಪಡಿಸಿ ಜ.28ಕ್ಕೆ ಕೊಟ್ಟೆವು. ಅಷ್ಟರೊಳಗೆ ಶೇ 20ರಷ್ಟು ದರ ಹೆಚ್ಚಾಗಿದೆ. ಹೆಚ್ಚಾದ ದರ ನಮಗೆ ಹಾನಿ ತಂದಿದೆ. ಹೀಗಾಗಿ ಕಡ್ಡಾಯವಾಗಿ ಪೂರ್ಣ ಹಣ ಪಾವತಿಸಬೇಕು ಎಂದು ಅಂಗಡಿಗೆ ಬೋರ್ಡ್‌ ಹಾಕಿದ್ದೇವೆ.
ರಂಗನಾಥ ಚಿ‍ಪ್ಪಲಕಟ್ಟಿ ವ್ಯಾಪಾರಿ ಗೋಕಾಕ
ನಮ್ಮ ಕುಟುಂಬ ಹಾಗೂ ಐವರು ಕಾರ್ಮಿಕರು ಸೇರಿ ಪ್ರತಿ ವರ್ಷ ಕನಿಷ್ಠ 300 ಕೆ.ಜಿ ಬೆಳ್ಳಿಯ ಸಾಮಗ್ರಿ ಮಾರಾಟ ಮಾಡುತ್ತಿದ್ದೇವು. ಕಳೆದ ಮೂರು ತಿಂಗಳಿನಿಂದ ಒಂದು ಗ್ರಾಂ ಕೂಡ ಬೇಡಿಕೆ ಬಂದಿಲ್ಲ. ಚಿನ್ನದ ದರ ಏರುವುದು ಸಹಜವೇ. ಆದರೆ ಬೆಳ್ಳಿಯ ದರವೂ ಈಗ ವಿಪರೀತ ಏರಿದ್ದರಿಂದ ನಮ್ಮ ಬದುಕೂ ಕಷ್ಟಕ್ಕೆ ಸಿಲುಕಿದೆ.
ಪ್ರಫುಲ್‌ ಕಮತೆ ಅಕ್ಕಸಾಲಿಗ ಮಾಂಗೂರ
ನಮಗೆ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ತಯಾರು ಮಾಡಲು ಮಾತ್ರ ಬರುತ್ತದೆ. ಇದನ್ನು ಬಿಟ್ಟರೆ ಬೇರೆ ಉದ್ಯೋಗ ಏನೂ ಬರುವುದಿಲ್ಲ. ವ್ಯಾಪಾರವೂ ಸಾಧ್ಯವಿಲ್ಲ. ಆದರೆ ಬೆಳ್ಳಿ ದುಬಾರಿ ಆದಾಗಿನಿಂದ ಮಾಲೀಕರಿಗೆ ಆರ್ಡರ್‌ ಬರುತ್ತಿಲ್ಲ. ಕೆಲಸವಿಲ್ಲದೇ ನಾವು ಕೂಡ ಖಾಲಿ ಕುಳಿತಿದ್ದೇವೆ. ಈಗ ವಡಾಪಾವ್ ಮಾರಾಟ ಮಾಡಬೇಕು ಎಂದು ಯೋಚಿಸಿದ್ದೇನೆ.
ವಿಶ್ವನಾಥ ಪತ್ತಾರ ಸರಾಫ್‌ ಬಜಾರ್‌ ಬೆಳಗಾವಿ
ಅರ್ಧಕ್ಕೆ ನಿಂತ ‘ಸಿಲ್ವರ್‌ ಪಾರ್ಕ್‌’
ನಿಪ್ಪಾಣಿ ತಾಲ್ಲೂಕಿನ ಮಾಂಗೂರಿನಲ್ಲಿ ಒಂದು ‘ಸಿಲ್ವರ್‌ ಪಾರ್ಕ್‌’ ನಿರ್ಮಿಸಲು ಮಾಜಿ ಸಚಿವ ಮುರುಗೇಶ ನಿರಾಣಿ ಮುಂದಾಗಿದ್ದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಜೆಟ್‌ನಲ್ಲಿ ₹5 ಕೋಟಿ ನೀಡಿದ್ದರು. 14 ಎಕರೆ ಜಾಗ ಖರೀದಿಸಿ ರಸ್ತೆ ವಿದ್ಯುತ್‌ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಕಟ್ಟಡಗಳನ್ನೇ ಕಟ್ಟಿಲ್ಲ. 2008ರಲ್ಲಿ ಮಂಜೂರಾಗಿದ್ದ ಈ ಯೋಜನೆ ಈಗಲೂ ಕನಸಾಗೇ ಉಳಿದಿದೆ. ಹೀಗಾಗಿ ಬೆಳ್ಳಿ ಆಭರಣ ತಯಾರಿಕೆಯನ್ನೇ ನೆಚ್ಚಿಕೊಂಡ ಮಾಂಗೂರಿನ ಜನರ ಬಾಳು ಕತ್ತಲೆಗೆ ತಳ್ಳಿದೆ. ಸದ್ಯ ಬೆಳ್ಳಿಯ ದರ ಇಳಿಕೆಯತ್ತ ಸಾಗಿದೆ. ಆದರೆ ಪ್ರತಿ ಕೆಜಿ ಬೆಳ್ಳಿಗೆ ₹1.5 ಲಕ್ಷ ಅಥವಾ ದಕ್ಕಿಂತ ಕಡಿಮೆ ಆಗುವವರೆಗೆ ಉದ್ಯಮಿಗಳು ಆರ್ಡರ್‌ ನೀಡುವುದಿಲ್ಲ. ಗಟ್ಟಿ ಮಾಲು ಕೊಡುವುದಿಲ್ಲ. ಇದರಿಂದ ಯಾವುದೇ ಮೂರ್ತಿ ಆಭರಣ ಅಥವಾ ತಟ್ಟೆಗಳನ್ನು ತಯಾರು ಮಾಡಲು ಆಗುವುದಿಲ್ಲ. ಸಹಜವಾಗಿಯೇ ಮಹಾರಾಷ್ಟ್ರದೊಂದಿಗಿನ ವ್ಯಾಪಾರ ನಿಂತುಹೋಗಿದೆ. ಇದೆಲ್ಲಕ್ಕೂ ಸಿಲ್ವರ್‌ ಪಾರ್ಕ್‌ ಮಾತ್ರ ಪರಿಹಾರ ನೀಡಲಿದೆ ಎಂಬುದು ಈ ಊರಿನ ಜನರ ಬೇಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT