



ಶೇ 90ರಷ್ಟು ಅಕ್ಕಸಾಲಿಗರಿಗೆ ಬೇರೆ ಕೆಲಸ– ವ್ಯಾಪಾರ ಬರುವುದಿಲ್ಲ. ಕೆಲವು ಕಾರ್ಮಿಕರು ವಡಾ–ಪಾವ್ ಮಾರುವ ಗೂಡಂಗಡಿ ಇಟ್ಟುಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ‘ಬುದ್ಧಿ’ ಕಲಿತ ನಾನು ಕಷ್ಟಕಾಲಕ್ಕೆ ಬರಲಿ ಎಂದು ಒಂದಷ್ಟು ಸಂಗ್ರಹ ಮಾಡಿಕೊಂಡಿದ್ದೆ. ಈಗ ಅದಷ್ಟೇ ಆಧಾರ.ಆನಂದ ಹಾವನೂರ ಅಕ್ಕಸಾಲಿಗ ಬೆಳಗಾವಿ
ದರಗಳು ಕನಿಷ್ಠ ಮೂರು ತಿಂಗಳು ಸ್ಥಿರವಾಗಿ ನಿಲ್ಲದಿರುವುದೂ ದೊಡ್ಡ ಸಮಸ್ಯೆ. ಉದಾಹರಣೆಗೆ; ಜ.25ರಂದು ಒಬ್ಬ ಗ್ರಾಹಕರು 20 ತೊಲಿ ಬಂಗಾರದ ಆರ್ಡರ್ ಕೊಟ್ಟರು. ನಾವು ಆಭರಣ ಸಿದ್ಧಪಡಿಸಿ ಜ.28ಕ್ಕೆ ಕೊಟ್ಟೆವು. ಅಷ್ಟರೊಳಗೆ ಶೇ 20ರಷ್ಟು ದರ ಹೆಚ್ಚಾಗಿದೆ. ಹೆಚ್ಚಾದ ದರ ನಮಗೆ ಹಾನಿ ತಂದಿದೆ. ಹೀಗಾಗಿ ಕಡ್ಡಾಯವಾಗಿ ಪೂರ್ಣ ಹಣ ಪಾವತಿಸಬೇಕು ಎಂದು ಅಂಗಡಿಗೆ ಬೋರ್ಡ್ ಹಾಕಿದ್ದೇವೆ.ರಂಗನಾಥ ಚಿಪ್ಪಲಕಟ್ಟಿ ವ್ಯಾಪಾರಿ ಗೋಕಾಕ
ನಮ್ಮ ಕುಟುಂಬ ಹಾಗೂ ಐವರು ಕಾರ್ಮಿಕರು ಸೇರಿ ಪ್ರತಿ ವರ್ಷ ಕನಿಷ್ಠ 300 ಕೆ.ಜಿ ಬೆಳ್ಳಿಯ ಸಾಮಗ್ರಿ ಮಾರಾಟ ಮಾಡುತ್ತಿದ್ದೇವು. ಕಳೆದ ಮೂರು ತಿಂಗಳಿನಿಂದ ಒಂದು ಗ್ರಾಂ ಕೂಡ ಬೇಡಿಕೆ ಬಂದಿಲ್ಲ. ಚಿನ್ನದ ದರ ಏರುವುದು ಸಹಜವೇ. ಆದರೆ ಬೆಳ್ಳಿಯ ದರವೂ ಈಗ ವಿಪರೀತ ಏರಿದ್ದರಿಂದ ನಮ್ಮ ಬದುಕೂ ಕಷ್ಟಕ್ಕೆ ಸಿಲುಕಿದೆ.ಪ್ರಫುಲ್ ಕಮತೆ ಅಕ್ಕಸಾಲಿಗ ಮಾಂಗೂರ
ನಮಗೆ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ತಯಾರು ಮಾಡಲು ಮಾತ್ರ ಬರುತ್ತದೆ. ಇದನ್ನು ಬಿಟ್ಟರೆ ಬೇರೆ ಉದ್ಯೋಗ ಏನೂ ಬರುವುದಿಲ್ಲ. ವ್ಯಾಪಾರವೂ ಸಾಧ್ಯವಿಲ್ಲ. ಆದರೆ ಬೆಳ್ಳಿ ದುಬಾರಿ ಆದಾಗಿನಿಂದ ಮಾಲೀಕರಿಗೆ ಆರ್ಡರ್ ಬರುತ್ತಿಲ್ಲ. ಕೆಲಸವಿಲ್ಲದೇ ನಾವು ಕೂಡ ಖಾಲಿ ಕುಳಿತಿದ್ದೇವೆ. ಈಗ ವಡಾಪಾವ್ ಮಾರಾಟ ಮಾಡಬೇಕು ಎಂದು ಯೋಚಿಸಿದ್ದೇನೆ.ವಿಶ್ವನಾಥ ಪತ್ತಾರ ಸರಾಫ್ ಬಜಾರ್ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.