<p>ಬೆಳಗಾವಿ/ಹಾಸನ/ಕಲಬುರಗಿ: ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಪಾಸಣೆ ಬಳಿಕ ಹುಸಿ ಎಂದು ದೃಢಪಟ್ಟಿದೆ.</p>.<p>ಆದರೆ, ಬೆದರಿಕೆ ಕರೆಯಿಂದಾಗಿ ಬೆಳಗಿನ ಹೊತ್ತು ಕಲಾಪ ವ್ಯತ್ಯಯವಾಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ದಿನಗಳ ಹಿಂದೆಯೂ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬೆದರಿಕೆ ಕರೆ ಬಂದಿತ್ತು.</p>.<p>ಬೆಳಗಾವಿ ವರದಿ: ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂದು ಇ– ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಮಧ್ಯಾಹ್ನದ ಎಲ್ಲ ಕಲಾಪ ತಕ್ಷಣ ಸ್ಥಗಿತಗೊಳಿಸಲಾಯಿತು.</p>.<p>ಎಲ್ಲ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನೆರವಿನಲ್ಲಿ ಸುಮಾರು ಮೂರು ತಾಸು ಪರಿಶೀಲನೆ ನಡೆಸಿದರು. </p>.<p>‘ಸಿಬ್ಬಂದಿ ನ್ಯಾಯಾಲಯ ಆವರಣವನ್ನು ಪರಿಶೀಲಿಸಿದ್ದು, ಹುಸಿ ಎಂದು ಗೊತ್ತಾಗಿದೆ. ಈ ರೀತಿ ಹುಸಿ ಬೆದರಿಕೆ ಹಾಕಿದವರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಡಿಸಿಪಿ ನಾರಾಯಣ ಭರಮನಿ ತಿಳಿಸಿದರು.</p>.<p>‘ಆರ್ಡಿಎಕ್ಸ್ ಬಾಂಬ್ ಸ್ಫೋಟಿಸುವ ಬೆದರಿಕೆ’</p>.<p>ಹಾಸನ ವರದಿ: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಮಂಗಳವಾರ 3ನೇ ಬಾರಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದು, ಪೊಲೀಸರ ತಪಾಸಣೆಯ ನಂತರ ಬೆದರಿಕೆ ಹುಸಿ ಎಂಬುದು ಗೊತ್ತಾಯಿತು. </p>.<p>ಬೆಳಿಗ್ಗೆ 5.40ಕ್ಕೆ ಕೋರ್ಟ್ನ ಅಧಿಕೃತ ಇ-ಮೇಲ್ ಐಡಿಗೆ ಸಂದೇಶ ಬಂದಿದ್ದು, ‘ಬೆಳಿಗ್ಗೆ 11.50ಕ್ಕೆ ಸೈನೈಡ್ ವಿಷಾನಿಲ ತುಂಬಿದ ಆರ್ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ. ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು ಹಾಗೂ ನಾಗರಿಕರನ್ನು ಸ್ಥಳಾಂತರಿಸಬೇಕು’ ಎಂದು ಬೆದರಿಕೆ ಹಾಕಲಾಗಿತ್ತು.</p>.<p>ಭಯೋತ್ಪಾದನೆ, ಕಾನೂನು ಹಾಗೂ 26/11 ಮುಂಬೈ ದಾಳಿಯ ಸಂದರ್ಭದ ವಿಚಾರಗಳನ್ನು ಉಲ್ಲೇಖಿಸಿ, ಅಜ್ಮಲ್ ಕಸಬ್ ಹೆಸರನ್ನೂ ಪ್ರಸ್ತಾಪಿಸಲಾಗಿತ್ತು.</p>.<p>ಡಿಎಆರ್ನ ಡಿವೈಎಸ್ಪಿ ಪಾಲಾಕ್ಷ ನೇತೃತ್ವದಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತೀವ್ರ ಪರಿಶೀಲನೆ ನಡೆಸಿದರು. ಹುಸಿ ಎಂದು ಸಾಬೀತಾದ ಬಳಿಕ ಕೆಲಸಗಳನ್ನು ಪುನರಾರಂಭಿಸಲಾಯಿತು. </p>.<p>ಡಿ.15ರಂದು ಜಿಲ್ಲಾಧಿಕಾರಿ ಕಚೇರಿಯ ಇ-ಮೇಲ್ಗೆ, ಜನವರಿ 6 ಮತ್ತು ಫೆ.16 ರಂದು ಕೋರ್ಟ್ನ ಅಧಿಕೃತ ಇ-ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿತ್ತು. ಆಲೂರು ತಾಲ್ಲೂಕು ಕಚೇರಿಗೂ ಇಂಥದ್ದೇ ಇ–ಮೇಲ್ ಬಂದಿತ್ತು.</p>.<p>ಕಲಬುರಗಿ ಜಿಲ್ಲಾ ಕೋರ್ಟ್ಗೂ ಬೆದರಿಕೆ<br />ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಮಂಗಳವಾರ ಬೆದರಿಕೆ ಇ–ಮೇಲ್ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕ ಆವರಿಸಿತ್ತು. </p>.<p>ಶ್ವಾನದಳ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ವಿಧ್ವಂಸಕ ಕೃತ್ಯ ತಡೆ ತಂಡದ ನೆರವಿನಲ್ಲಿ ಪೊಲೀಸರು ಮೂರು ಗಂಟೆಗಳಿಗೂ ಅಧಿಕ ಕಾಲ ತಪಾಸಣೆ ನಡೆಸಿದರು.</p>.<p>ಬಳಿಕ ಅದು ಹುಸಿ ಬೆದರಿಕೆ ಎಂಬುದು ಗೊತ್ತಾಯಿತು. ಇದರಿಂದ ಕೋರ್ಟ್ ಕಲಾಪ ಅರ್ಧ ದಿನ ಸ್ಥಗಿತಗೊಂಡಿತು. ಮಧ್ಯಾಹ್ನ ಕಲಾಪಗಳು ನಡೆದರೂ ಕಕ್ಷಿದಾರರ ಕೊರತೆ ಕಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ/ಹಾಸನ/ಕಲಬುರಗಿ: ರಾಜ್ಯದ ಮೂರು ಜಿಲ್ಲೆಗಳಲ್ಲಿ ಮಂಗಳವಾರ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಪಾಸಣೆ ಬಳಿಕ ಹುಸಿ ಎಂದು ದೃಢಪಟ್ಟಿದೆ.</p>.<p>ಆದರೆ, ಬೆದರಿಕೆ ಕರೆಯಿಂದಾಗಿ ಬೆಳಗಿನ ಹೊತ್ತು ಕಲಾಪ ವ್ಯತ್ಯಯವಾಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೆಲ ದಿನಗಳ ಹಿಂದೆಯೂ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬೆದರಿಕೆ ಕರೆ ಬಂದಿತ್ತು.</p>.<p>ಬೆಳಗಾವಿ ವರದಿ: ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬಾಂಬ್ ಇಡಲಾಗಿದೆ ಎಂದು ಇ– ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದ್ದು, ಮಧ್ಯಾಹ್ನದ ಎಲ್ಲ ಕಲಾಪ ತಕ್ಷಣ ಸ್ಥಗಿತಗೊಳಿಸಲಾಯಿತು.</p>.<p>ಎಲ್ಲ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನೆರವಿನಲ್ಲಿ ಸುಮಾರು ಮೂರು ತಾಸು ಪರಿಶೀಲನೆ ನಡೆಸಿದರು. </p>.<p>‘ಸಿಬ್ಬಂದಿ ನ್ಯಾಯಾಲಯ ಆವರಣವನ್ನು ಪರಿಶೀಲಿಸಿದ್ದು, ಹುಸಿ ಎಂದು ಗೊತ್ತಾಗಿದೆ. ಈ ರೀತಿ ಹುಸಿ ಬೆದರಿಕೆ ಹಾಕಿದವರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಡಿಸಿಪಿ ನಾರಾಯಣ ಭರಮನಿ ತಿಳಿಸಿದರು.</p>.<p>‘ಆರ್ಡಿಎಕ್ಸ್ ಬಾಂಬ್ ಸ್ಫೋಟಿಸುವ ಬೆದರಿಕೆ’</p>.<p>ಹಾಸನ ವರದಿ: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಮಂಗಳವಾರ 3ನೇ ಬಾರಿಗೆ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿದ್ದು, ಪೊಲೀಸರ ತಪಾಸಣೆಯ ನಂತರ ಬೆದರಿಕೆ ಹುಸಿ ಎಂಬುದು ಗೊತ್ತಾಯಿತು. </p>.<p>ಬೆಳಿಗ್ಗೆ 5.40ಕ್ಕೆ ಕೋರ್ಟ್ನ ಅಧಿಕೃತ ಇ-ಮೇಲ್ ಐಡಿಗೆ ಸಂದೇಶ ಬಂದಿದ್ದು, ‘ಬೆಳಿಗ್ಗೆ 11.50ಕ್ಕೆ ಸೈನೈಡ್ ವಿಷಾನಿಲ ತುಂಬಿದ ಆರ್ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ. ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು ಹಾಗೂ ನಾಗರಿಕರನ್ನು ಸ್ಥಳಾಂತರಿಸಬೇಕು’ ಎಂದು ಬೆದರಿಕೆ ಹಾಕಲಾಗಿತ್ತು.</p>.<p>ಭಯೋತ್ಪಾದನೆ, ಕಾನೂನು ಹಾಗೂ 26/11 ಮುಂಬೈ ದಾಳಿಯ ಸಂದರ್ಭದ ವಿಚಾರಗಳನ್ನು ಉಲ್ಲೇಖಿಸಿ, ಅಜ್ಮಲ್ ಕಸಬ್ ಹೆಸರನ್ನೂ ಪ್ರಸ್ತಾಪಿಸಲಾಗಿತ್ತು.</p>.<p>ಡಿಎಆರ್ನ ಡಿವೈಎಸ್ಪಿ ಪಾಲಾಕ್ಷ ನೇತೃತ್ವದಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತೀವ್ರ ಪರಿಶೀಲನೆ ನಡೆಸಿದರು. ಹುಸಿ ಎಂದು ಸಾಬೀತಾದ ಬಳಿಕ ಕೆಲಸಗಳನ್ನು ಪುನರಾರಂಭಿಸಲಾಯಿತು. </p>.<p>ಡಿ.15ರಂದು ಜಿಲ್ಲಾಧಿಕಾರಿ ಕಚೇರಿಯ ಇ-ಮೇಲ್ಗೆ, ಜನವರಿ 6 ಮತ್ತು ಫೆ.16 ರಂದು ಕೋರ್ಟ್ನ ಅಧಿಕೃತ ಇ-ಮೇಲ್ ಐಡಿಗೆ ಬೆದರಿಕೆ ಸಂದೇಶ ಬಂದಿತ್ತು. ಆಲೂರು ತಾಲ್ಲೂಕು ಕಚೇರಿಗೂ ಇಂಥದ್ದೇ ಇ–ಮೇಲ್ ಬಂದಿತ್ತು.</p>.<p>ಕಲಬುರಗಿ ಜಿಲ್ಲಾ ಕೋರ್ಟ್ಗೂ ಬೆದರಿಕೆ<br />ಕಲಬುರಗಿ: ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಮಂಗಳವಾರ ಬೆದರಿಕೆ ಇ–ಮೇಲ್ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕ ಆವರಿಸಿತ್ತು. </p>.<p>ಶ್ವಾನದಳ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ, ವಿಧ್ವಂಸಕ ಕೃತ್ಯ ತಡೆ ತಂಡದ ನೆರವಿನಲ್ಲಿ ಪೊಲೀಸರು ಮೂರು ಗಂಟೆಗಳಿಗೂ ಅಧಿಕ ಕಾಲ ತಪಾಸಣೆ ನಡೆಸಿದರು.</p>.<p>ಬಳಿಕ ಅದು ಹುಸಿ ಬೆದರಿಕೆ ಎಂಬುದು ಗೊತ್ತಾಯಿತು. ಇದರಿಂದ ಕೋರ್ಟ್ ಕಲಾಪ ಅರ್ಧ ದಿನ ಸ್ಥಗಿತಗೊಂಡಿತು. ಮಧ್ಯಾಹ್ನ ಕಲಾಪಗಳು ನಡೆದರೂ ಕಕ್ಷಿದಾರರ ಕೊರತೆ ಕಾಡಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>