‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯನ್ನು ಸುಪ್ರಿಂಕೋರ್ಟ್ ವಾಪಸ್ ಪಡೆದಿದ್ದು ಸ್ವಾಗತಾರ್ಹ. ನ್ಯಾಯಾಲಯವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿದಿದೆ. ರಾಜಕೀಯದಲ್ಲಿ ಟೀಕೆ– ಟಿಪ್ಪಣಿ ಸಹಜ. ಅದನ್ನೇ ದೊಡ್ಡ ಪ್ರತಿಷ್ಠೆ ಮಾಡಿಕೊಂಡು, ಮಾನಹಾನಿ ಕೇಸ್ ಹಾಕಿದ್ದು ವಿಚಿತ್ರ ಬೆಳವಣಿಗೆ. ಯಾವಾಗಲೂ ಸತ್ಯಕ್ಕೆ ಜಯವಾಗುತ್ತದೆ’ ಎಂದರು.