ಚಿಕ್ಕೋಡಿಯ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಲ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗಜೀವನರಾಮ್ ಅವರು ನಡೆದು ಬಂದ ದಾರಿಯ ಕುರಿತು ಆಶಾ ಕಾಂಬಳೆ ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಸಮಾಜದ ಮುಖಂಡರಾದ ಬಾಬಾಸಾಹೇಬ ಕೆಂಚನ್ನವರ, ರಾಜು ಮೈಶಾಳೆ, ರಾಯಪ್ಪ ಶಿರಹಟ್ಟಿ, ಅನಿಲ ಮೈಶಾಳೆ, ಪ್ರಶಾಂತ ಪಾಟೀಲ, ಭರತ ಕಲಾಚಂದ್ರ, ಸಂಜಯ ದೇಸಾಯಿ ಇದ್ದರು.