<p><strong>ಹಾರೂಗೇರಿ</strong>: ‘ಸಮ್ಮೇಳನಗಳು ಒಡೆದ ಮನಸ್ಸುಗಳನ್ನು ಕಟ್ಟುವ ಸಾಮರಸ್ಯದ ತಾಣಗಳಾಗಿವೆ. ಆಧುನಿಕ ಭರಾಟೆಯಲ್ಲಿ ಛಿದ್ರವಾಗುತ್ತಿರುವ ಮನಸ್ಸುಗಳಲ್ಲಿ ಬಂಧುತ್ವ ಭಾವ ಬೆಳೆಸುತ್ತವೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ವಿ.ಎಸ್.ಮಾಳಿ ಅಭಿಪ್ರಾಯಪಟ್ಟರು.</p><p>ಇಲ್ಲಿನ ಜೈನ ಸಮುದಾಯ ಭವನದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಜಿಲ್ಲಾಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಸಾಹಿತ್ಯ ಸಮ್ಮೇಳನಗಳು ಮಾತೃಭಾಷೆ ಬಗ್ಗೆ ಅಭಿಮಾನ ಮೂಡಿಸುತ್ತವೆ. ಅವು ಮೆರವಣಿಗೆಗೆ ಸೀಮಿತವಾಗದೆ, ಜನಸಾಮಾನ್ಯರ ಬದುಕು ಕಟ್ಟುವ ಶಕ್ತಿಕೇಂದ್ರಗಳಾಗಬೇಕು. ನಮಗೆ ಸಂಪತ್ತಿನ ಶ್ರೀಮಂತಿಕೆ ಬೇಡ, ಸಾಂಸ್ಕೃತಿಕ ಶ್ರೀಮಂತಿಕೆ ಬೇಕು. ಇಲ್ಲದಿದ್ದರೆ ಬಹುತ್ವ ಭಾರತದ ಕನಸು ಸಾಕಾರಗೊಳ್ಳದು. ಪ್ರಜಾಪ್ರಭುತ್ವದ ಆಶಯ ಈಡೇರದು’ ಎಂದು ಒತ್ತಿಹೇಳಿದರು.</p><p>‘ನಾನು ಹಾರೂಗೇರಿಗೆ ತೊತ್ತಾಗಿ ದುಡಿದೆ. ಅದು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತು ಮೆರೆಸಿತು. ನಾನು ಸಲ್ಲಿಸಿದ ಸೇವೆ ಅಲ್ಪ. ಆದರೆ, ನೀವು ಕೊಟ್ಟ ಪ್ರೀತಿ ಬೆಟ್ಟದಷ್ಟು’ ಎಂದರು. </p><p>ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ‘ವೈಷಮ್ಯ ತುಂಬಿದ ಭಾವನೆಗಳು ದೇಶವನ್ನು ಕೆಡವಿದರೆ, ಮಾನವೀಯ ಮೌಲ್ಯ, ಪ್ರೀತಿ ತುಂಬಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದೇಶವನ್ನು ಸದೃಢವಾಗಿ ಕಟ್ಟುತ್ತವೆ’ ಎಂದು ಹೇಳಿದರು.</p><p>ಶಾಸಕರಾದ ಮಹೇಂದ್ರ ತಮ್ಮಣ್ಣವರ, ದುರ್ಯೋಧನ ಐಹೊಳೆ ಮಾತನಾಡಿದರು.</p><p>ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ಕೊಟ್ಟರು. </p><p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ಈರನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾ ಬಾಳಪ್ಪನವರ ಸ್ವಾಗತಿದರು. ವಿಠ್ಠಲ ಜೋಡಟ್ಟಿ ಮತ್ತು ಶಾರದಾ ಬಿ.ಎಲ್. ನಿರೂಪಿಸಿದರು. ಸಿ.ಎಂ.ದರಬಾರೆ ವಂದಿಸಿದರು.</p><p>ಹಾರೂಗೇರಿ ಪುರಸಭೆ ಸದಸ್ಯರು, ವಿವಿಧ ಸಂಘಟನೆಯವರು ಹಾಜರಿದ್ದರು.</p><p><strong>ಕಣ್ಮನಸೆಳೆದ ಮೆರವಣಿಗೆ</strong></p><p>ಕನ್ನಡ ಹಬ್ಬದ ಸಡಗರದಲ್ಲಿ ಇಡೀ ಹಾರೂಗೇರಿ ಪಟ್ಟಣ ಮಿಂದೆದ್ದಿತು. ಬೆಳಿಗ್ಗೆ ನಡೆದ ಸರ್ವಾಧ್ಯಕ್ಷರ ಮೆರವಣಿಗೆ ಕಣ್ಮನಸೆಳೆಯಿತು. ವಿವಿಧ ರೂಪಕಗಳು, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.</p><p>ಜಂಬಗಿ ಆಸ್ಪತ್ರೆಯಿಂದ ಹೊರಟ ಮೆರವಣಿಗೆ, ಬಿ.ಆರ್.ಅಂಬೇಡ್ಕರ್ ವೃತ್ತ, ವಿಶ್ವಕರ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನವೃಷಬೇಂದ್ರ ವೃತ್ತ ಮಾರ್ಗವಾಗಿ ಸಾಗಿ, ಸಮ್ಮೇಳನದ ವೇದಿಕೆ ತಲುಪಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾರೂಗೇರಿ</strong>: ‘ಸಮ್ಮೇಳನಗಳು ಒಡೆದ ಮನಸ್ಸುಗಳನ್ನು ಕಟ್ಟುವ ಸಾಮರಸ್ಯದ ತಾಣಗಳಾಗಿವೆ. ಆಧುನಿಕ ಭರಾಟೆಯಲ್ಲಿ ಛಿದ್ರವಾಗುತ್ತಿರುವ ಮನಸ್ಸುಗಳಲ್ಲಿ ಬಂಧುತ್ವ ಭಾವ ಬೆಳೆಸುತ್ತವೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ವಿ.ಎಸ್.ಮಾಳಿ ಅಭಿಪ್ರಾಯಪಟ್ಟರು.</p><p>ಇಲ್ಲಿನ ಜೈನ ಸಮುದಾಯ ಭವನದಲ್ಲಿ ಶನಿವಾರದಿಂದ ಆರಂಭಗೊಂಡ ಎರಡು ದಿನಗಳ ಜಿಲ್ಲಾಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p><p>‘ಸಾಹಿತ್ಯ ಸಮ್ಮೇಳನಗಳು ಮಾತೃಭಾಷೆ ಬಗ್ಗೆ ಅಭಿಮಾನ ಮೂಡಿಸುತ್ತವೆ. ಅವು ಮೆರವಣಿಗೆಗೆ ಸೀಮಿತವಾಗದೆ, ಜನಸಾಮಾನ್ಯರ ಬದುಕು ಕಟ್ಟುವ ಶಕ್ತಿಕೇಂದ್ರಗಳಾಗಬೇಕು. ನಮಗೆ ಸಂಪತ್ತಿನ ಶ್ರೀಮಂತಿಕೆ ಬೇಡ, ಸಾಂಸ್ಕೃತಿಕ ಶ್ರೀಮಂತಿಕೆ ಬೇಕು. ಇಲ್ಲದಿದ್ದರೆ ಬಹುತ್ವ ಭಾರತದ ಕನಸು ಸಾಕಾರಗೊಳ್ಳದು. ಪ್ರಜಾಪ್ರಭುತ್ವದ ಆಶಯ ಈಡೇರದು’ ಎಂದು ಒತ್ತಿಹೇಳಿದರು.</p><p>‘ನಾನು ಹಾರೂಗೇರಿಗೆ ತೊತ್ತಾಗಿ ದುಡಿದೆ. ಅದು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತು ಮೆರೆಸಿತು. ನಾನು ಸಲ್ಲಿಸಿದ ಸೇವೆ ಅಲ್ಪ. ಆದರೆ, ನೀವು ಕೊಟ್ಟ ಪ್ರೀತಿ ಬೆಟ್ಟದಷ್ಟು’ ಎಂದರು. </p><p>ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ‘ವೈಷಮ್ಯ ತುಂಬಿದ ಭಾವನೆಗಳು ದೇಶವನ್ನು ಕೆಡವಿದರೆ, ಮಾನವೀಯ ಮೌಲ್ಯ, ಪ್ರೀತಿ ತುಂಬಿದ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ದೇಶವನ್ನು ಸದೃಢವಾಗಿ ಕಟ್ಟುತ್ತವೆ’ ಎಂದು ಹೇಳಿದರು.</p><p>ಶಾಸಕರಾದ ಮಹೇಂದ್ರ ತಮ್ಮಣ್ಣವರ, ದುರ್ಯೋಧನ ಐಹೊಳೆ ಮಾತನಾಡಿದರು.</p><p>ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ಕೊಟ್ಟರು. </p><p>ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿಗಳನ್ನಾಡಿದರು. ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ಈರನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನಾ ಬಾಳಪ್ಪನವರ ಸ್ವಾಗತಿದರು. ವಿಠ್ಠಲ ಜೋಡಟ್ಟಿ ಮತ್ತು ಶಾರದಾ ಬಿ.ಎಲ್. ನಿರೂಪಿಸಿದರು. ಸಿ.ಎಂ.ದರಬಾರೆ ವಂದಿಸಿದರು.</p><p>ಹಾರೂಗೇರಿ ಪುರಸಭೆ ಸದಸ್ಯರು, ವಿವಿಧ ಸಂಘಟನೆಯವರು ಹಾಜರಿದ್ದರು.</p><p><strong>ಕಣ್ಮನಸೆಳೆದ ಮೆರವಣಿಗೆ</strong></p><p>ಕನ್ನಡ ಹಬ್ಬದ ಸಡಗರದಲ್ಲಿ ಇಡೀ ಹಾರೂಗೇರಿ ಪಟ್ಟಣ ಮಿಂದೆದ್ದಿತು. ಬೆಳಿಗ್ಗೆ ನಡೆದ ಸರ್ವಾಧ್ಯಕ್ಷರ ಮೆರವಣಿಗೆ ಕಣ್ಮನಸೆಳೆಯಿತು. ವಿವಿಧ ರೂಪಕಗಳು, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.</p><p>ಜಂಬಗಿ ಆಸ್ಪತ್ರೆಯಿಂದ ಹೊರಟ ಮೆರವಣಿಗೆ, ಬಿ.ಆರ್.ಅಂಬೇಡ್ಕರ್ ವೃತ್ತ, ವಿಶ್ವಕರ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನವೃಷಬೇಂದ್ರ ವೃತ್ತ ಮಾರ್ಗವಾಗಿ ಸಾಗಿ, ಸಮ್ಮೇಳನದ ವೇದಿಕೆ ತಲುಪಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>