ಮಂಗಳವಾರ, 5 ಆಗಸ್ಟ್ 2025
×
ADVERTISEMENT
ADVERTISEMENT

ಹುಕ್ಕೇರಿ ಕದನ ಕಣ : ಬಿಜೆಪಿ–ಕಾಂಗ್ರೆಸ್‌ ನೇರ ಪೈಪೋಟಿ

‘ಅನುಕಂಪ’ದ ಅಲೆಯೋ, ‘ಅನುಭವ’ಕ್ಕೆ ಮಣೆಯೋ, ಯಾರ ಕೈಹಿಡಿಯಲಿದ್ದಾನೆ ಮತದಾರ?
Published : 8 ಮೇ 2023, 4:45 IST
Last Updated : 8 ಮೇ 2023, 5:31 IST
ಫಾಲೋ ಮಾಡಿ
Comments
ಪಂಚಮಸಾಲಿ ಸಮುದಾಯದ ಬಲ
ಕಾಂಗ್ರೆಸ್‌ನ ಹುರಿಯಾಳು ಎ.ಬಿ.ಪಾಟೀಲ ಈ ಹಿಂದೆ ಸಂಕೇಶ್ವರ ಕ್ಷೇತ್ರದಿಂದಲೂ ಮೂರು ಬಾರಿ ಆಯ್ಕೆಯಾಗಿದ್ದರು. ಈಗ ಹುಕ್ಕೇರಿ ಕ್ಷೇತ್ರದಿಂದ ಗೆಲ್ಲುವ ಉತ್ಸಾಹದಿಂದ ಅಖಾಡಕ್ಕೆ ಧುಮುಕಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತವನ್ನೇ ಜನರ ಮುಂದಿಡುತ್ತ ಮತಯಾಚಿಸುತ್ತಿದ್ದರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಹಾಗೂ ಬೆನ್ನಿಗಿರುವ ಪಂಚಮಸಾಲಿ ಸಮುದಾಯ ಅವರ ಬಲ ಹೆಚ್ಚಿಸಿದೆ.
ಕ್ಷೇತ್ರದ ಜನ ಏನಂತಾರೆ?
‘ಹುಕ್ಕೇರಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಉಮೇಶ ಕತ್ತಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರು. ಈಗ ಅವರ ಪುತ್ರನಲ್ಲಿಯೂ ಕೆಲಸ ಮಾಡುವ ಉತ್ಸಾಹವಿದೆ. ಯುವಪೀಳಿಗೆ ರಾಜಕಾರಣಕ್ಕೆ ಬರಬೇಕು ಎಂಬುದು ನಮ್ಮ ಆಸೆ. ಹಾಗಾಗಿ ಬಿಜೆಪಿ ಬೆಂಬಲಿಸುತ್ತಿದ್ದೇವೆ’ ಎಂದು ಹುಕ್ಕೇರಿ ಪಟ್ಟಣದಲ್ಲಿ ಕೆಲ ಯುವಕರು ಹೇಳಿದರು.
ಜಾತಿವಾರು ಅಂದಾಜು ಲೆಕ್ಕಾಚಾರ
ಹುಕ್ಕೇರಿ ಕ್ಷೇತ್ರದಲ್ಲಿ 75 ಸಾವಿರ ಲಿಂಗಾಯತರು 38 ಸಾವಿರ ಪರಿಶಿಷ್ಟರು 30 ಸಾವಿರ ಮರಾಠರು 25 ಸಾವಿರ ಮುಸ್ಲಿಮರು 8 ಸಾವಿರ ಕುರುಬರು ಹಾಗೂ ಇತರೆ ಸಮುದಾಯಗಳ 32 ಸಾವಿರ ಮತದಾರರಿದ್ದಾರೆ. ಕಾಂಗ್ರೆಸ್-ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಲಿಂಗಾಯತರು. ಅವರು ತಮ್ಮ ಸಮುದಾಯದ ಮತಗಳನ್ನು ಸೆಳೆಯುವ ಜತೆಗೆ ಉಳಿದ ಸಮುದಾಯದವರ ಓಲೈಕೆಗಾಗಿ ಪ್ರಯತ್ನ ಜೋರಾಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT