ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಕಾಂಗ್ರೆಸ್ನವರು 2013ರ ಜ.7ರಿಂದ ಜ.14ರವರೆಗೆ ಹೊಸಪೇಟೆಯಿಂದ ಕೂಡಲಸಂಗಮದವರೆಗೆ ಪಾದಯಾತ್ರೆ (ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ) ನಡೆಸಿದ್ದರು. ನಮಗೆ ಅಧಿಕಾರ ಕೊಡಿ, 5 ವರ್ಷಗಳಲ್ಲಿ 130 ಟಿಎಂಸಿ ನೀರನ್ನು ಬಳಸಿಕೊಂಡು 7 ಜಿಲ್ಲೆಗಳಲ್ಲಿ ನೀರಾವರಿಗೆ ಅನುಕೂಲ ಕಲ್ಪಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಸರ್ಕಾರ ಬಂದಾಗ ನಿದ್ರೆ ಮಾಡಿ ಹೋದರು ಎಂದು ಟೀಕಿಸಿದರು.