ಬೆಳಗಾವಿ: ‘ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಡಾ.ಅಮಿತ್ ಪಿಂಗಟ್ ಹೇಳಿದರು.
ನಗರದಲ್ಲಿ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವಡಗಾವಿಯ ನೇಕಾರ ಕಾಲನಿಯ ಸಾಯಿ ಸೇವಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯ ಸಂತೋಷ ಟೋಪಗಿ, ಡಾ.ವೀರೇಂದ್ರ ಅಷ್ಟಗಿ, ಡಾ.ಯೋಗೇಶ ರಾವಳ, ಸಂತೋಷ ಇತಾಪೆ ಇದ್ದರು. ಶಿಬಿರದಲ್ಲಿ 250ಕ್ಕೂ ಅಧಿಕ ಜನರ ತಪಾಸಣೆ ನಡೆಸಿ, ಔಷಧಗಳನ್ನು ವಿತರಿಸಲಾಯಿತು.