<p><strong>ಬೆಳಗಾವಿ:</strong> ‘ಕ್ಷೇತ್ರದ ಜನರ ಆಶೀರ್ವಾದ ಎಲ್ಲಕ್ಕಿಂತ ದೊಡ್ಡದು. ಇದಕ್ಕಿಂತ ಸುದೈವ ಬೇರೆ ಇಲ್ಲ’ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.</p>.<p>ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ ಮಸಣಾಯಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಚುನಾವಣೆಯಲ್ಲಿ ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಮನೆ ಮಗಳಂತೆ ಕಂಡಿದ್ದೀರಿ. ಕ್ಷೇತ್ರದ ಜನರಲ್ಲೇ ನಾನು ದೇವರನ್ನು ಕಾಣುತ್ತೇನೆ’ ಎಂದರು.</p>.<p>‘ಕ್ಷೇತ್ರದ ಪ್ರತಿ ಗ್ರಾಮದಲ್ಲೂ ದೇವಸ್ಥಾನ, ರಸ್ತೆ, ಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದೇನೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ಕೊಡುತ್ತಿದ್ದೇನೆ. ಇವೆಲ್ಲ ಜನರ ಬದುಕಿನಲ್ಲಿ ನೆಮ್ಮದಿ ನೀಡುವಂತವು. ಕನಿಷ್ಠ ಅಗತ್ಯಗಳನ್ನೂ ಕಲ್ಪಿಸದಿದ್ದರೆ ಜನಪ್ರತಿನಿಧಿಗಳು ಕರ್ತವ್ಯದಿಂದ ಪಲಾಯನ ಮಾಡಿದಂತಾಗುತ್ತದೆ. ನಾನು ಎಂದಿಗೂ ಜನರಿಂದ ದೂರವಾಗುವವಳಲ್ಲ’ ಎಂದರು.</p>.<p>ದೇವಸ್ಥಾನ ಸಮಿತಿಯ ಸದಸ್ಯರು, ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮುಖಂಡರಾದ ಶಿವಾಜಿ ಅತಿವಾಡಕರ, ರೇಮಾಣಿ ತರಳೆ, ಶಿವಾಜಿ ರಾಕ್ಷೆ, ಶಂಕರ ತರಳೆ, ರಾಜು ಕೊಚಾರಿ, ಅಮೋಲ್ ಬಾತ್ಕಂಡೆ, ಭರಮಾ ಮನ್ನೋಳಕರ, ಅರುಣ ಬೆಳಗಾಂವಕರ, ಸಂಜು ತರಳೆ, ದೇವಪ್ಪ ಮನ್ನೋಳಕರ, ಶಿವಾಜಿ ಚೌಗುಲೆ, ಬಾಬು ತರಳೆ, ರಾಜು ತರಳೆ, ಅಶೋಕ ಯಳಗುಕರ, ಪಿ.ಡಿ. ಕೋಲಕಾರ, ಪರುಶರಾಮ ತರಳೆ, ಮಾರುತಿ ಕಾಕತಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಕ್ಷೇತ್ರದ ಜನರ ಆಶೀರ್ವಾದ ಎಲ್ಲಕ್ಕಿಂತ ದೊಡ್ಡದು. ಇದಕ್ಕಿಂತ ಸುದೈವ ಬೇರೆ ಇಲ್ಲ’ ಎಂದು ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.</p>.<p>ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ ಮಸಣಾಯಿ ದೇವಸ್ಥಾನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ಚುನಾವಣೆಯಲ್ಲಿ ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಗೆಲ್ಲಿಸಿದ್ದೀರಿ. ಮನೆ ಮಗಳಂತೆ ಕಂಡಿದ್ದೀರಿ. ಕ್ಷೇತ್ರದ ಜನರಲ್ಲೇ ನಾನು ದೇವರನ್ನು ಕಾಣುತ್ತೇನೆ’ ಎಂದರು.</p>.<p>‘ಕ್ಷೇತ್ರದ ಪ್ರತಿ ಗ್ರಾಮದಲ್ಲೂ ದೇವಸ್ಥಾನ, ರಸ್ತೆ, ಶಾಲೆಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದೇನೆ. ಕುಡಿಯುವ ನೀರಿನ ಸೌಲಭ್ಯಕ್ಕೆ ಆದ್ಯತೆ ಕೊಡುತ್ತಿದ್ದೇನೆ. ಇವೆಲ್ಲ ಜನರ ಬದುಕಿನಲ್ಲಿ ನೆಮ್ಮದಿ ನೀಡುವಂತವು. ಕನಿಷ್ಠ ಅಗತ್ಯಗಳನ್ನೂ ಕಲ್ಪಿಸದಿದ್ದರೆ ಜನಪ್ರತಿನಿಧಿಗಳು ಕರ್ತವ್ಯದಿಂದ ಪಲಾಯನ ಮಾಡಿದಂತಾಗುತ್ತದೆ. ನಾನು ಎಂದಿಗೂ ಜನರಿಂದ ದೂರವಾಗುವವಳಲ್ಲ’ ಎಂದರು.</p>.<p>ದೇವಸ್ಥಾನ ಸಮಿತಿಯ ಸದಸ್ಯರು, ಹಿರಿಯರು, ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಮುಖಂಡರಾದ ಶಿವಾಜಿ ಅತಿವಾಡಕರ, ರೇಮಾಣಿ ತರಳೆ, ಶಿವಾಜಿ ರಾಕ್ಷೆ, ಶಂಕರ ತರಳೆ, ರಾಜು ಕೊಚಾರಿ, ಅಮೋಲ್ ಬಾತ್ಕಂಡೆ, ಭರಮಾ ಮನ್ನೋಳಕರ, ಅರುಣ ಬೆಳಗಾಂವಕರ, ಸಂಜು ತರಳೆ, ದೇವಪ್ಪ ಮನ್ನೋಳಕರ, ಶಿವಾಜಿ ಚೌಗುಲೆ, ಬಾಬು ತರಳೆ, ರಾಜು ತರಳೆ, ಅಶೋಕ ಯಳಗುಕರ, ಪಿ.ಡಿ. ಕೋಲಕಾರ, ಪರುಶರಾಮ ತರಳೆ, ಮಾರುತಿ ಕಾಕತಕರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>