<p><strong>ಹುಕ್ಕೇರಿ</strong>: ‘ಮಠದವೆಂದರೆ ಒಂದು ಧರ್ಮದ ಕೇಂದ್ರವಲ್ಲ. ಅದೊಂದು ಆಧ್ಯಾತ್ಮಿಕ ಸೌಧ ಎಂಬುದನ್ನು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾಬೀತುಪಡಿಸಿದ್ದಾರೆ‘ ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಫ್ ಹೇಳಿದರು.</p>.<p>ಶನಿವಾರ ತಾಲ್ಲೂಕಿನ ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದರು.</p>.<p>‘ಆಧ್ಯಾತ್ಮವು ಎಲ್ಲ ಮನಸ್ಸುಗಳನ್ನು ಬೆಸೆಯುವ ಶಕ್ತಿ ಹೊಂದಿದ್ದು, ಶ್ರೀಮಠದ ಧಾರ್ಮಿಕ ಪರಂಪರೆಯ ಆಧ್ಯಾತ್ಮಿಕ ಚಿಂತನೆ ಗಡಿಭಾಗದಲ್ಲಿ ಜಾತಿ ಹಾಗೂ ಭಾಷಾ ಬಾಂಧವ್ಯ ಮೀರಿ ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತಿದೆ‘ ಎಂದರು.</p>.<p>‘ನಾನು ಶ್ರೀಮಠದ ಭಕ್ತನಾಗಿದ್ದು, ಮಠದ ದಾಸೋಹದ ಪರಂಪರೆ ಮಹಾರಾಷ್ಟ್ರದ ಜನರಲ್ಲಿ ಭಕ್ತಿ ಭಾವ ಮೂಡಿಸುವ ಕಾರ್ಯವುಸಮಾಜಕ್ಕೆ ಸದಾ ಪ್ರೇರಣೆಯಾಗಿದ್ದು, ಶ್ರೀಮಠಕ್ಕೆ ಸಚಿವನಾದ ಬಳಿಕ ಶ್ರೀಗಳ ಆಶೀರ್ವಾದ ಪಡೆದಿರುವೆ‘ ಎಂದರು.</p>.<p>ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಉತ್ತಮ ಆದರ್ಶಗಳು ಸಮಾಜದ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿದ್ದು, ಸಚಿವ ಹಸನ್ ಮುಶ್ರಫ್ ಅವರು ದೊರೆತಿರುವ ಅಧಿಕಾರಾವಧಿಯಲ್ಲಿ ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸಲಿ‘ ಎಂದು ಸಲಹೆ ನೀಡಿದರು. </p>.<p>ನಾಗೇಶ ಕೊಲ್ಹಾಪೂರೆ, ಸತೀಶ ಪಾಟೀಲ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಕ್ಕೇರಿ</strong>: ‘ಮಠದವೆಂದರೆ ಒಂದು ಧರ್ಮದ ಕೇಂದ್ರವಲ್ಲ. ಅದೊಂದು ಆಧ್ಯಾತ್ಮಿಕ ಸೌಧ ಎಂಬುದನ್ನು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾಬೀತುಪಡಿಸಿದ್ದಾರೆ‘ ಎಂದು ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಫ್ ಹೇಳಿದರು.</p>.<p>ಶನಿವಾರ ತಾಲ್ಲೂಕಿನ ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದು ಮಾತನಾಡಿದರು.</p>.<p>‘ಆಧ್ಯಾತ್ಮವು ಎಲ್ಲ ಮನಸ್ಸುಗಳನ್ನು ಬೆಸೆಯುವ ಶಕ್ತಿ ಹೊಂದಿದ್ದು, ಶ್ರೀಮಠದ ಧಾರ್ಮಿಕ ಪರಂಪರೆಯ ಆಧ್ಯಾತ್ಮಿಕ ಚಿಂತನೆ ಗಡಿಭಾಗದಲ್ಲಿ ಜಾತಿ ಹಾಗೂ ಭಾಷಾ ಬಾಂಧವ್ಯ ಮೀರಿ ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತಿದೆ‘ ಎಂದರು.</p>.<p>‘ನಾನು ಶ್ರೀಮಠದ ಭಕ್ತನಾಗಿದ್ದು, ಮಠದ ದಾಸೋಹದ ಪರಂಪರೆ ಮಹಾರಾಷ್ಟ್ರದ ಜನರಲ್ಲಿ ಭಕ್ತಿ ಭಾವ ಮೂಡಿಸುವ ಕಾರ್ಯವುಸಮಾಜಕ್ಕೆ ಸದಾ ಪ್ರೇರಣೆಯಾಗಿದ್ದು, ಶ್ರೀಮಠಕ್ಕೆ ಸಚಿವನಾದ ಬಳಿಕ ಶ್ರೀಗಳ ಆಶೀರ್ವಾದ ಪಡೆದಿರುವೆ‘ ಎಂದರು.</p>.<p>ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಉತ್ತಮ ಆದರ್ಶಗಳು ಸಮಾಜದ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿದ್ದು, ಸಚಿವ ಹಸನ್ ಮುಶ್ರಫ್ ಅವರು ದೊರೆತಿರುವ ಅಧಿಕಾರಾವಧಿಯಲ್ಲಿ ಸಮಾಜಕ್ಕೆ ಒಳ್ಳೆಯ ಸೇವೆ ಸಲ್ಲಿಸಲಿ‘ ಎಂದು ಸಲಹೆ ನೀಡಿದರು. </p>.<p>ನಾಗೇಶ ಕೊಲ್ಹಾಪೂರೆ, ಸತೀಶ ಪಾಟೀಲ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>