ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ವಿವಾದ: ಕೊಲೆ

Published 9 ಜೂನ್ 2023, 16:16 IST
Last Updated 9 ಜೂನ್ 2023, 16:16 IST
ಅಕ್ಷರ ಗಾತ್ರ

ಗೋಕಾಕ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಅಣ್ಣ ತಮ್ಮನಿಗೆ ಬರ್ಚಿಯಿಂದ ಇರಿದು ಕೊಲೆ ಮಾಡಿದ ಘಟನೆಯೊಂದು ತಾಲ್ಲೂಕಿನ ಪಟ್ಟಣದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

ಶಿವಮೊಗ್ಗದ ನಿವಾಸಿ ಪ್ರಕಾಶ ಜಯಾ ಬೋಸನೆ (26) ಕೊಲೆಯಾದ ವ್ಯಕ್ತಿ. ಘಟನೆಯಲ್ಲಿ ಒಂದೂವರೆ ವರ್ಷದ ಬಾಲಕಿ ಗುಡ್ಡಿ ಪ್ರಕಾಶ ಬೋಸಲೆ ಗಾಯಗೊಂಡಿದ್ದಾಳೆ.

ಹಣಕಾಸು ವ್ಯವಹಾರದ ಹೊರತಾಗಿ ಮೃತ ಪ್ರಕಾಶ ತನಗಿಂತ ವಯಸ್ಸಿನಲ್ಲಿ ದೊಡ್ಡವಳಾದ ದುದಿ ಎಂಬುವರರನ್ನು ಎರಡನೇ ವಿವಾಹ ಮಾಡಿಕೊಂಡಿದ್ದ ಎಂದೂ ಆತನೊಂದಿಗೆ ಬಿನ್ನಾಭಿಪ್ರಾಯ ಹೊಂದಿದ್ದನು.  ಆತನ ಹಿರಿಯ ಸಹೋದರ ಅಕ್ಬರ ಜಯಾ ಬೋಸಲೆ ತನ್ನ ಇನ್ನೋರ್ವ ಸಹೋದರ ಅಜಿಮೀರ ಹಾಗೂ ಸೋದರ ಸಂಬಂಧಿಗಳಾದ ಕಿಲ್ಲೆಪಾ ಬೊಸಲೆ, ಕಿರಿಶ ವಡ್ಡರನಾಗ, ಬೋಸರ್ಯಾ ತಿರುಪಟೇಲ ಬೋಸಲೆ ಮತ್ತು ತಾಯಿತಾನ ಅಜಮಸಾ ಬೋಸಲೆ ಎಂಬುವವರೊಂದಿಗೆ ಒಳಸಂಚು ರೂಪಿಸಿ, ಪ್ರಕಾಶ ನಿದ್ರಾವಸ್ತೆಯಲ್ಲಿದ್ದಾಗ ದ್ವೇಷ ಸಾಧನೆಗಾಗಿ ಕೊಲೆ ಮಾಡಿದ್ದಾನೆ ಎಂದು ಮೃತ ಪ್ರಕಾಶನ ಪತ್ನಿ ದುದಿ (27) ಅಂಕಲಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT