ಬೆಳಗಾವಿ: ಕೆಎಲ್ಇ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯ ಜೆಎನ್ಎಂಸಿಯ ಕೌನ್ಸೆಲಿಂಗ್ ಘಟಕ ಮತ್ತು ಮನೋವಿಜ್ಞಾನ ವಿಭಾಗದಿಂದ ಇಲ್ಲಿನ ಶಾಹು ನಗರದ ದುರ್ಗಾ ಮಾತಾ ಗಲ್ಲಿಯಲ್ಲಿರುವ ಶಾರದಾ ಮಾತಾ ಸ್ವಾಧಾರ ಗೃಹದಲ್ಲಿ ‘ವಿಶ್ವ ಮಾನಸಿಕ ಆರೋಗ್ಯ ದಿನ’ದ ಅಂಗವಾಗಿ ಶನಿವಾರ ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಯಾಸ್ಮಿನ್ ಡಿ.ಎನ್. ಅವರು ಮಾನಸಿಕ ಒತ್ತಡ ನಿರ್ವಹಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ‘ವಿಭಾಗದಿಂದ ಪ್ರತಿ ದಿನ ಮಹಿಳೆಯರಿಗೆ ಧ್ಯಾನ ಹೇಳಿಕೊಡಲಾಗುತ್ತಿದೆ’ ಎಂದು ತಿಳಿಸಿದರು.
ಅಲ್ಲಿನ ಮಹಿಳೆಯರಿಗೆ ಅಕಾಡೆಮಿಯಿಂದ ಮಾಸ್ಕ್ಗಳು, ಕ್ರೀಡಾ ಸಾಮಗ್ರಿಗಳು ಮತ್ತು ಕ್ರಾಫ್ಟ್ ಮಾಡುವ ಸಾಮಗ್ರಿಗಳನ್ನು ನೀಡಲಾಯಿತು.
ವಿಭಾಗದ ಕ್ಯಾರಲ್ ಡಿಸೋಜಾ, ಸ್ವಾಧಾರ ಗೃಹದ ವಾರ್ಡನ್ ಶೈಲಜಾ, ಡಾ.ಚೇತನ್ ಇದ್ದರು.