ಪೊಲೀಸರೊಂದಿಗೆ ಮಾತಿನ ಚಕಮಕಿ: ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ಮಹಾ ಮೇಳಾವ್ಗೆ ಸಿದ್ಧತೆಗೆ ಎಸಿಪಿ ನಾರಾಯಣ ಭರಮನಿ ಹಾಗೂ ಅಧಿಕಾರಿಗಳು ತಡೆಯೊಡ್ಡಿದರು. ಆಗ ಎಂಇಎಸ್ ಮುಖಂಡರಾದ ಮನೋಹರ ಕಿಣೇಕರ್, ರಾಜಾಬಾವು ಪಾಟೀಲ ಇತರರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ನಿಷೇಧಾಜ್ಞೆ ಮಾಹಿತಿ ನೀಡಿದ ಬಳಿಕ ನಿರ್ಗಮಿಸಿದರು.